Advertisement

ಪ್ರತಿಭೆ ಇದ್ದವರಿಗೆ ರೆಡ್‌ ಕಾರ್ಪೆಟ್

10:43 AM Apr 24, 2020 | Suhan S |

ಒಂದು ಕಾಲವಿತ್ತು. ಕನ್ನಡ ಚಿತ್ರಗಳು ಬೆಂಗಳೂರು ದಾಟಿ ಹೊರ ಹೋಗುವುದಿಲ್ಲ ಎಂದು. ಆದರೆ ಈಗ ಕಾಲ ಬದಲಾಗಿದೆ. ಕನ್ನಡ ಚಿತ್ರಗಳು ತಮ್ಮ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿವೆ.

Advertisement

ಕೇವಲ ಕರ್ನಾಟಕವಷ್ಟೇ ಅಲ್ಲದೇ, ದೇಶ ವಿದೇಶಗಳಲ್ಲಿ ತೆರೆಕಾಣುತ್ತಿವೆ. ಈ ಮೂಲಕ ಕನ್ನಡದ ಮಾರುಕಟ್ಟೆ ವಿಸ್ತರಣೆಯಾಗುವ ಜೊತೆಗೆ ಕನ್ನಡದ ಸಿನಿಮಾಗಳಿಗೆ, ಕನ್ನಡ ಕಲಾವಿದರಿಗೆ ಬೇರೆ ಭಾಷೆಗಳಲ್ಲಿ ಅವಕಾಶ ಸಿಗುತ್ತಿದೆ. ಈ ಮೂಲಕ ಕಲಾವಿದರು ಕೂಡಾ ಭಾಷೆಯ ಹಂಗು ತೊರೆದು ಬೇರೆ ಬೇರೆ ಚಿತ್ರರಂಗದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ರಶ್ಮಿಕಾ, ನಭಾ ನಟೇಶ್‌ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಒಂದಷ್ಟು ಕನ್ನಡದ ನಟ-ನಟಿಯರು ಆಗಾಗ ಬೇರೆ ಬೇರೆ ತೆಲುಗು ಚಿತ್ರಗಳಲ್ಲಿ ನಟಿಸುತ್ತಾ ಬ್ಯುಸಿಯಾಗಿದ್ದಾರೆ. ಈಗ ಇನ್ನೊಂದಿಷ್ಟು ಮಂದಿಗೆ ಅವಕಾಶಗಳು ಒದಗಿ ಬರುತ್ತಿವೆ. ಅದರಲ್ಲಿ ಡಾಲಿ ಧನಂಜಯ್‌ ಕೂಡಾ ಒಬ್ಬರು.

ಹೌದು, ಡಾಲಿ ಖ್ಯಾತಿಯ ಧನಂಜಯ್‌ ಮತ್ತೂಮ್ಮೆ ಟಾಲಿವುಡ್‌ಗೆ ಎಂಟ್ರಿ ಕೊಡುವುದು ಬಹುತೇಕ ಖಚಿತ ಎನ್ನಲಾಗಿದ್ದು, ಸ್ಟೈಲಿಶ್‌ ಸ್ಟಾರ್‌ ಅಲ್ಲು ಅರ್ಜುನ್‌ ಅಭಿನಯದ ಪುಷ್ಪ ಸಿನಿಮಾದಲ್ಲಿ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಮಾಹಿತಿ ಇತ್ತೀಚೆಗೆ ಲಭ್ಯವಾಗಿದೆ. ಇದರ ನಡುವೆ ಇನ್ನೊಂದು ಅಚ್ಚರಿಯ ವಿಷಯವೆಂದರೆ, ತಮಿಳಿನ ವಿಜಯ್‌ ಸೇತುಪತಿಯವರ ಜಾಗಕ್ಕೆ ಡಾಲಿ ಆಯ್ಕೆಯಾಗಿದ್ದಾರೆ ಎಂಬ ಮಾತುಗಳು.

ಹೌದು, ಟಾಲಿವುಡ್‌ನ‌ ಬಹುನಿರೀಕ್ಷಿತ ಪುಷ್ಪ ಸಿನಿಮಾ ದಲ್ಲಿ ವಿಲನ್‌ ಆಗಿ ವಿಜಯ್‌ ಸೇತುಪತಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಈ ಮೂಲಕ ಅಲ್ಲು ಅರ್ಜುನ್‌ ವಿರುದ್ಧ ತೊಡೆ ತಟ್ಟಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದೀಗ ಬರುತ್ತಿರುವ ಮಾಹಿತಿ ಪ್ರಕಾರ ಪುಷ್ಪ ಸಿನಿಮಾದಿಂದ ವಿಜಯ್‌ ಸೇತುಪತಿ ಹೊರ ನಡೆದಿದ್ದಾರಂತೆ. ಈ ಚಿತ್ರ ಬಹುಭಾಷೆಯಲ್ಲಿ ತಯಾರಾಗುತ್ತಿರುವುದೇ ವಿಜಯ್‌ ಸೇತುಪತಿ ಸಿನಿಮಾದಿಂದ ಹೊರ ಬರಲು ಕಾರಣ ಎನ್ನಲಾಗಿದೆ.

ಈ ಮೊದಲು ಪುಷ್ಪ ಚಿತ್ರ ತೆಲುಗಿನಲ್ಲಿ ಮಾತ್ರ ರಿಲೀಸ್‌ ಆಗಲಿದೆ ಎಂದು ವಿಜಯ್‌ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದರಂತೆ. ವಿಜಯ್‌ ಒಪ್ಪಿಕೊಂಡ ನಂತರ ಪ್ಯಾನ್‌ ಇಂಡಿಯಾ ಸಿನಿಮಾವಾಗಿ ರಿಲೀಸ್‌ ಆಗುತ್ತಿದೆ ಎಂದು ತಿಳಿದಿದ್ದರಿಂದ, ಸಿನಿಮಾದಿಂದ ಹೊರನಡೆದಿದ್ದಾರಂತೆ. ಮತ್ತೂಂದೆಡೆ, ವಿಜಯ್‌ಗೆ ತಮಿಳಿನಲ್ಲಿ ವಿಲನ್‌ ಆಗಿ ಕಾಣಿಸಿಕೊಳ್ಳಲು ಇಷ್ಟವಿಲ್ಲ ವಂತೆ. ಇದರಿಂದಾಗಿ ಅವರ ತಮಿಳು ಅಭಿಮಾನಿ  ಗಳಿಗಾಗಿ ಬೇಸರವಾ ಗುತ್ತಂತೆ. ಹೀಗಾಗಿ ವಿಜಯ್‌ ಪುಷ್ಪ ಸಿನಿಮಾದಿಂದ ಹೊರಬಂದಿದ್ದಾರೆ ಎಂದು ಕೂಡ ಹೇಳಲಾಗುತ್ತಿದೆ. ಇಷ್ಟೇ ಅಲ್ಲದೆ ವಿಜಯ್‌ ಸದ್ಯ ತಮಿಳಿನ ಮಾಸ್ಟರ್‌ ಸಿನಿಮಾ ರಿಲೀಸ್‌ಗೆ ಎದುರು ನೋಡುತ್ತಿದ್ದು, ಮತ್ತೂಂದೆಡೆ ತಮಿಳು, ತೆಲುಗು ಹಾಗೂ ಹಿಂದಿ ಸೇರಿ 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ವಿಜಯ್‌ ಸೇತುಪತಿ ಬ್ಯುಸಿಯಾಗಿದ್ದಾರಂತೆ.

Advertisement

ಹೀಗಾಗಿ ಡೇಟ್‌ ಹೊಂದಾಣಿಕೆಯಾ ಗುತ್ತಿಲ್ಲವಂತೆ. ಇದಕ್ಕಾಗಿ ಪುಷ್ಪ ಸಿನಿಮಾದಿಂದ ಹೊರ ಬಂದಿದ್ದಾರೆ ಎಂದು ಸಹ ಹೇಳಲಾಗುತ್ತಿದೆ. ಆದರೆ ಈ ಕುರಿತು ಖಚಿತ ಮಾಹಿತಿ ಲಭ್ಯವಾಗಿಲ್ಲ. ಒಟ್ಟಾರೆ ವಿಜಯ್‌ ಸೇತುಪತಿ ಚಿತ್ರದಿಂದ ಹೊರನಡೆದಿದ್ದರಿಂದ ಆ ಜಾಗಕ್ಕೆ ಕನ್ನಡದ ಡಾಲಿ ಧನಂಜಯ್‌ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಡಾಲಿಗೆ ಈಗಾಗಲೇ ಚಿತ್ರ ತಂಡದಿಂದ ಆಫರ್‌ ಬಂದಿದ್ದು, ಲಾಕ್‌ಡೌನ್‌ ಮುಗಿದ ಬಳಿಕ ಸಿನಿಮಾಗೆ ಸಹಿ ಹಾಕಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ವಿಜಯ್‌ ಸೇತುಪತಿ ಪಾತ್ರವನ್ನೇ ನಿರ್ವಹಿಸುತ್ತಾರಾ, ಬೇರೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರಾ ಎನ್ನುವುದು ಖಚಿತವಾಗಿಲ್ಲ.­

Advertisement

Udayavani is now on Telegram. Click here to join our channel and stay updated with the latest news.

Next