Advertisement

ರೆಬೆಲ್‌ ಭೀಷ್ಮ –ದುರ್ಯೋಧನ ನೋಡಲು ಕಾತುರ

09:23 AM Jul 22, 2019 | Lakshmi GovindaRaj |

ಈಗ ಎಲ್ಲೆಡೆ “ಕುರುಕ್ಷೇತ್ರ’ ಚಿತ್ರದ್ದೇ ಜೋರು ಸುದ್ದಿ. ದರ್ಶನ್‌ ಅಭಿನಯದ “ಕುರುಕ್ಷೇತ್ರ’ ಸದ್ಯದ ಮಟ್ಟಿಗೆ ನಿರೀಕ್ಷೆ ಹುಟ್ಟಿಸಿರುವುದಂತೂ ಸುಳ್ಳಲ್ಲ. ಚಿತ್ರ ಯಾವಾಗ ಶುರವಾಯಿತೋ, ಅಂದಿನಿಂದಲೂ ಸಾಕಷ್ಟು ಕುತೂಹಲ ಮೂಡಿಸಿದ್ದ “ಕುರುಕ್ಷೇತ್ರ’ ಯಾವಾಗ ಬಿಡುಗಡೆಯಾಗುತ್ತೆ ಎಂಬ ಪ್ರಶ್ನೆ ಇತ್ತು.

Advertisement

ಅದಕ್ಕೆ ಸ್ವತಃ ನಿರ್ಮಾಪಕರೇ ಆಗಸ್ಟ್‌ 2 ರಂದು ಪ್ರಪಂಚಾದ್ಯಂತ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ. ಹಾಗಾಗಿ ದರ್ಶನ್‌ ಅಭಿಮಾನಿಗಳಷ್ಟೇ ಅಲ್ಲ, ಇಡೀ ಕನ್ನಡ ಚಿತ್ರರಂಗ ಸೇರಿದಂತೆ ಪರಭಾಷೆ ಚಿತ್ರರಂಗ ಕೂಡ “ಕುರುಕ್ಷೇತ್ರ’ವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದೆ.

ಅದರ ಬೆನ್ನಲ್ಲೇ ಸಂಸದರಾದ ಸುಮಲತಾ ಅಂಬರೀಶ್‌ ಅವರು ಸಹ ತಮ್ಮ ಟ್ವೀಟರ್‌ ಖಾತೆಯಲ್ಲಿ, “ಕುರುಕ್ಷೇತ್ರ’ ಚಿತ್ರದ ಬಗ್ಗೆ ಟ್ವೀಟ್‌ ಮಾಡುವ ಮೂಲಕ ಅಭಿಮಾನಿಗಳ ಖುಷಿಗೆ ಮತ್ತಷ್ಟು ಕಾರಣರಾಗಿದ್ದಾರೆ. ಹೌದು, ಸುಮಲತಾ ಅವರು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ “ದುರ್ಯೋಧನ ಹಾಗು ರೆಬೆಲ್‌ ಭೀಷ್ಮ ಇವರಿಬ್ಬರನ್ನು ತೆರೆಯ ಮೇಲೆ ನೋಡಲು ಕಾಯುತ್ತಿದ್ದೇನೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಚಿತ್ರದಲ್ಲಿ ದರ್ಶನ್‌ ದುರ್ಯೋಧನನಾಗಿ ಕಾಣಿಸಿಕೊಂಡರೆ, ರೆಬೆಲ್‌ಸ್ಟಾರ್‌ ಅಂಬರೀಶ್‌ ಅವರು ಭೀಷ್ಮ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. “ಕುರುಕ್ಷೇತ್ರ’ ಅಂಬರೀಶ್‌ ಅಭಿನಯದ ಕೊನೆಯ ಚಿತ್ರ ಎಂಬುದು ಮತ್ತೂಂದು ವಿಶೇಷ.ಅಂದಹಾಗೆ, “ಕುರುಕ್ಷೇತ್ರ’ ಚಿತ್ರ ಬಿಡುಗಡೆಗೆ ಇನ್ನು ಕೇವಲ ಹನ್ನೆರೆಡು ದಿನಗಳು ಮಾತ್ರ ಬಾಕಿ ಉಳಿದಿವೆ.

ಈಗಾಗಲೇ ದರ್ಶನ್‌ ಅಭಿಮಾನಿಗಳು, ಚಿತ್ರ ಬಿಡುಗಡೆಯ ದಿನವನ್ನು ಎಣಿಸತೊಡಗಿದ್ದಾರೆ. ಈಗಿನಿಂದಲೇ ಚಿತ್ರ ನೋಡಲು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಸಿನಿಮಾ ನೋಡಲು ಚಿತ್ರರಂಗದ ಮಂದಿ ಕಾದಿದ್ದಾರೆ.

Advertisement

ಇದೇ ಮೊದಲ ಸಲ ಭಾರತದ ಇತಿಹಾಸದಲ್ಲಿ ಪೌರಾಣಿಕ ಸಿನಿಮಾ “ಕುರುಕ್ಷೇತ್ರ’ 3ಡಿಯಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಅನೇಕ ವಿಶೇಷತೆಗಳೂ ಇವೆ. ಕನ್ನಡ ಚಿತ್ರರಂಗದ ಬಹುತೇಕ ನಟರು, ತಂತ್ರಜ್ಞರು ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.

ಚಿತ್ರದಲ್ಲಿ ಧರ್ಮರಾಯನಾಗಿ ಶಶಿಕುಮಾರ್‌, ಕರ್ಣನಾಗಿ ಅರ್ಜುನ್‌ ಸರ್ಜಾ, ಅರ್ಜುನನಾಗಿ ಸೋನುಸೂದ್‌, ಅಭಿಮನ್ಯುರಾಗಿ ನಿಖಿಲ್‌ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಮೇಘನಾರಾಜ್‌, ಹರಿಪ್ರಿಯಾ ಕೂಡ “ಕುರುಕ್ಷೇತ್ರ’ದಲ್ಲಿದ್ದಾರೆ. ಮುನಿರತ್ನ ನಿರ್ಮಾಣದ ಈ ಚಿತ್ರವನ್ನು ನಾಗಣ್ಣ ನಿರ್ದೇಶಿಸಿದ್ದು, ದೊಡ್ಡ ತಾಂತ್ರಿಕ ವರ್ಗ ಇಲ್ಲಿ ಕೆಲಸ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next