Advertisement

ರಾಜಕೀಯ ನಿವೃತ್ತಿಯಾಗಲೂ ಸಿದ್ದ, ಸಿದ್ದರಾಮಯ್ಯ ವಿರುದ್ಧ  ಆಪ್ತ ಭೈರತಿ ಕಿಡಿ!

10:33 AM Jul 10, 2019 | Team Udayavani |

ಮುಂಬೈ:ಗ್ರಾಮ ಪಂಚಾಯ್ತಿ ಸದಸ್ಯನಾಗಿ ರಾಜಕೀಯ ಜೀವನ ಆರಂಭಿಸಿ, ಎರಡು ಬಾರಿ ಶಾಸಕನಾಗಿದ್ದೇನೆ. ನನ್ನ ಪಕ್ಷದಿಂದ ಉಚ್ಚಾಟನೆ ಮಾಡಿದರೂ ರಾಜೀನಾಮೆ ವಾಪಸ್ ಇಲ್ಲ. ರಾಜಕೀಯ ನಿವೃತ್ತಿಯಾಗಲೂ ಸಿದ್ಧ..ಇದು ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಎಂದೇ ಗುರುತಿಸಿಕೊಂಡಿದ್ದ ಭೈರತಿ ಬಸವರಾಜು ಹೇಳಿಕೆ.

Advertisement

ಮುಂಬೈಯ ರೆಸಾರ್ಟ್ ನಲ್ಲಿ ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು, ರಾಜಕೀಯ ಜೀವನದಲ್ಲಿ ಕೈ, ಬಾಯಿ ಶುದ್ದವಾಗಿಟ್ಟು ಕೆಲಸ ಮಾಡಿದ್ದೇವೆ. ಮೂವತ್ತು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದೇವೆ. ಸಿದ್ದರಾಮಯ್ಯನವರಿಗಿಂತ ಮೊದಲು ನಾವು ಕಾಂಗ್ರೆಸ್ ನಲ್ಲಿದ್ದೇವು ಎಂದು ತಿರುಗೇಟು ನೀಡಿದ್ದಾರೆ.

ನಮಗೆ ನಮ್ಮ ಕ್ಷೇತ್ರದ ಅಭಿವೃದ್ದಿ ಮಾಡಲು ಆಗುತ್ತಿಲ್ಲ. ನಮ್ಮ ಕ್ಷೇತ್ರದ ಕೆಲಸ ಮಾಡಿಸಿಕೊಳ್ಳಲು ಆಗುವುದಿಲ್ಲ ಎಂದ ಮೇಲೆ ನಾವ್ಯಾಕೆ ಶಾಸಕನಾಗಿ ಇರಬೇಕು ಎಂದು ಈ ಸಂದರ್ಭದಲ್ಲಿ ಪ್ರಶ್ನಿಸಿದರು.

ನಾವು ಬೆನ್ನಿಗೆ ಚೂರಿ ಹಾಕಿಲ್ಲ. ಪಕ್ಷವನ್ನು ಕಟ್ಟಿ ಬೆಳೆಸಿದ ನಾವು ಯಾಕೆ ಕುದುರೆ ವ್ಯಾಪಾರಕ್ಕೆ ಒಳಗಾಗುತ್ತೇವೆ. ನಮ್ಮ ಸ್ವಂತ ಖರ್ಚಿನಲ್ಲಿ ಮುಂಬೈಗೆ ಆಗಮಿಸಿದ್ದೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next