Advertisement

ಹೈಕಮಾಂಡ್ ಸೂಚಿಸಿದರೆ ಈಗಲೇ ರಾಜೀನಾಮೆಗೆ ಸಿದ್ಧ: ಡಿಸಿಎಂ ಗೋವಿಂದ ಕಾರಜೋಳ

09:58 AM Jan 28, 2020 | Mithun PG |

ವಿಜಯಪುರ: ಬೆಂಗಳೂರಿನಿಂದ ಹೊರಗಿರುವ ನನಗೆ ಸಂಪುಟ ವಿಸ್ತರಣೆ ಕುರಿತು ನನಗೆ ಏನೂ ಗೊತ್ತಿಲ್ಲ. ಪಕ್ಷದ ಶಿಸ್ತಿನ ಸಿಪಾಯಿ ಆಗಿರುವ ನಾನು ಪಕ್ಷದ ಹೈಕಮಾಂಡ್ ಸೂಚಿದರೆ ಈಗಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಪ್ರತಿಕ್ರಿಯಿಸಿದ್ದಾರೆ.

Advertisement

ಸೋಮವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಡಿಸಿಎಂ ಸ್ಥಾನ, ಸಂಪುಟ ‌ವಿಸ್ತರಣೆ, ಸೋತವರಿಗೆ ಅಧಿಕಾರ ನೀಡಿಕೆಯಂಥ ವಿಷಯವನ್ನು ಪಕ್ಷ ನಿರ್ಧರಿಸುತ್ತದೆ. ಪ್ರಧಾನಿ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ, ಪಕ್ಷದ ಅಧ್ಯಕ್ಷರ ತೀರ್ಮಾನಕ್ಕೆ ಎಲ್ಲರೂ‌ ಬದ್ಧವಾಗಿರಬೇಕು ಎಂದರು.

ನಾನೇನು ಹೊರ ಜಿಲ್ಲೆಯವನಲ್ಲ. ಅಖಂಡ ವಿಜಯಪುರ ಜಿಲ್ಲೆಯ ನಾನು ಬಾಗಲಕೋಟೆ ವಿಭಜನೆ ಬಳಿಕ ಅಲ್ಲಿನ ಮುಧೋಳ ಕ್ಷೇತ್ರದಲ್ಲಿದ್ದೇನೆ. ಇಷ್ಟಕ್ಕೂ ನನ್ನ ಮೂಲ ವಿಜಯಪುರ ಜಿಲ್ಲೆ. ಹೀಗಾಗಿ ಹೊರಗಿನವನು ಎಂಬ ಮಾತಿಗೆ ಪ್ರತಿಕ್ರಿಯಿಸಲಾರೆ ಎಂದರು.\

Advertisement

Udayavani is now on Telegram. Click here to join our channel and stay updated with the latest news.

Next