Advertisement

ರಾಮನಗರ ಚುನಾವಣೆಗೆ ಸ್ಪರ್ಧಿಸಲು ಸಿದ್ಧ: ಸಿಪಿವೈ

06:05 AM Jun 04, 2018 | Team Udayavani |

ಚನ್ನಪಟ್ಟಣ: ಪಕ್ಷ ಸೂಚಿಸಿದರೆ ರಾಮನಗರ ಉಪಚುನಾವಣೆಗೆ ನಿಲ್ಲಲು ತಾವು ಸಿದ್ದ ಎಂದು ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್‌ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, “ನಾನು ಯಾವ ಚುನಾವಣೆಗೂ ಹಿಂದೆ ಸರಿಯಲ್ಲ.

Advertisement

ಕುಮಾರಸ್ವಾಮಿಯವರ ಕುಟುಂಬದ ವಿರುದ್ಧ ಮೂರು ಚುನಾವಣೆ ಎದುರಿಸಿದ್ದೇನೆ. ಅನಿತಾ ಕುಮಾರಸ್ವಾಮಿ
ಅವರನ್ನುಸೋಲಿಸಿದ್ದೇನೆ. ಪಕ್ಷ ಸೂಚಿಸಿದರೆ ರಾಮನಗರ ಉಪ ಚುನಾವಣೆಗೆ ನಿಲ್ಲಲು ಸಿದ್ದ. ಪಕ್ಷದ ಆದೇಶಕ್ಕಾಗಿ
ಕಾಯುತ್ತಿದ್ದೇನೆ’ ಎಂದರು.

ಎಚ್‌.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್‌ ನನ್ನ ರಾಜಕೀಯ ವೈರಿಗಳು. ಅವರನ್ನು ಹಿಂದೆಯೂ ಎದುರು ಹಾಕಿಕೊಂಡಿದ್ದೇನೆ.ಮುಂದೆಯೂ ಎದುರು ಹಾಕಿಕೊಳ್ಳುತ್ತೇನೆ. ಕುಮಾರಸ್ವಾಮಿಯವರ ಕಣ್ಣೀರಿನ ಮುಂದೆ ನನ್ನ ನೀರಾವರಿ ಯೋಜನೆ ಕೊಚ್ಚಿ ಹೋಗಿದೆ. ಅವರಿಗೆ ಶುಭ  ಕೋರುತ್ತೇನೆ’ ಎಂದರು.

ಕುಮಾರಸ್ವಾಮಿಯವರು ಸಾಂದರ್ಭಿಕ ಶಿಶು ಅಲ್ಲ, ದೇವೇಗೌಡರ ಪ್ರಣಾಳ ಶಿಶು.ಕುಮಾರಸ್ವಾಮಿಯವರು ದೇವೇಗೌಡರ ಮಂತ್ರಶಕ್ತಿಯಿಂದ ಹುಟ್ಟಿರುವ ಮಗು.
–  ಸಿ.ಪಿ.ಯೋಗೇಶ್ವರ್‌, ಮಾಜಿ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next