Advertisement

ಮುಖ್ಯಮಂತ್ರಿಗಳೊಂದಿಗೆ ಚರ್ಚೆಗೆ ಸಿದ್ದ

12:49 PM Dec 27, 2021 | Team Udayavani |

ಸೇಡಂ: ತಮ್ಮ ಅವಧಿಯಲ್ಲಿನ ಅಭಿವೃದ್ಧಿ ಕೆಲಸಗಳು ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದು ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಡಾ| ಶರಣಪ್ರಕಾಶ ಪಾಟೀಲ ಹೇಳಿದರು.

Advertisement

ಪುರಸಭೆಯ ವಾರ್ಡ್‌ ನಂ. 13 ವೆಂಕಟೇಶ್ವರ ನಗರ ಉಪ ಚುನಾವಣೆ ಪ್ರಯುಕ್ತ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ತಮ್ಮ ಅವಧಿಯಲ್ಲಿನ ಕಾಮಗಾರಿಗಳು ಪಾರದರ್ಶಕವಾಗಿರಲಿ ಎನ್ನುವ ಉದ್ದೇಶದಿಂದಅವುಗಳನ್ನು ನಿರ್ಮಿತಿ ಕೇಂದ್ರದವರಿಗೆ ನೀಡಲಾಗಿತ್ತು. ಆದರೀಗ ಆ ಪರಿಸ್ಥಿತಿ ಈಗಿಲ್ಲ ಎಂದು ಆಪಾದಿಸಿದರು.

ತಾವು ಮಾಡಿದ ಅಭಿವೃದ್ಧಿ ಜನರಿಗೆ ತಿಳಿದಿದೆ. ಪಟ್ಟಣದ ರಂಗಮಂದಿರ, ಯುಜಿಡಿ ಕಾಮಗಾರಿ, ಕ್ರೀಡಾಂಗಣ, ಮಿನಿ ವಿಧಾನಸೌಧ, 24/7 ನೀರು ಸರಬರಾಜು, ರಿಂಗ್‌ ರೋಡ್‌, ವಿದ್ಯಾರ್ಥಿ ವಸತಿ ನಿಲಯ ಕಟ್ಟಡಗಳು, ಪ್ರಥಮ ದರ್ಜೆ ಕಾಲೇಜು ಕಟ್ಟಡ, ಬಸ್‌ ನಿಲ್ದಾಣ, 100 ಹಾಸಿಗೆಯ ಆಸ್ಪತ್ರೆ, ಮಳಖೇಡದ ಕಾಗಿಣಾ ಮೇಲ್ಸೇತುವೆ, ಕಾಗಿಣಾ-ಕಮಲಾವತಿಗೆ ಬ್ರಿಡ್ಜ್ಕಂ ಬ್ಯಾರೇಜ ಯಾರು ಮಾಡಿದ್ದು ಎಂದು ಪ್ರಶ್ನಿಸಿದರು.

ಮುಖಂಡರಾದ ಶಿವಾನಂದ ಪಾಟೀಲ, ಸತೀಶರೆಡ್ಡಿ ಪಾಟೀಲ ರಂಜೋಳ, ಸುಭಾಷ ರಾಠೊಡ, ಜಗನ್ನಾಥ ಚಿಂತಪಳ್ಳಿ, ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ನಾಗೇಶ್ವರರಾವ್‌ ಮಾಲಿಪಾಟೀಲ, ಶರಣಪ್ಪ ಮೆಕ್ಯಾನಿಕ್‌ ಮಾತನಾಡಿದರು.

ಪುರಸಭೆಸದಸ್ಯ ಸಂತೋಷ ತಳವಾರ ನಿರೂಪಿಸಿದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ, ಅಭ್ಯರ್ಥಿ ದೇವು ತಿಪ್ಪಣ್ಣ ದೊರೆ, ಯುವಘಟಕ ಅಧ್ಯಕ್ಷ ಭೀಮಾಶಂಕರ ಕೊಳ್ಳಿ, ನಾಗಣ್ಣ ತೊಟ್ನಳ್ಳಿ, ಅಬ್ದುಲ್‌ ಗಫೂರ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next