Advertisement

ಏಕಾಗ್ರತೆಯಿಂದ ಓದಿ ಉತ್ತಮ ಅಂಕ ಗಳಿಸಿ

03:45 PM Mar 15, 2021 | Team Udayavani |

ಹಾವೇರಿ: ವಿದ್ಯಾರ್ಥಿಗಳು ತರಗತಿಯಲ್ಲಿ ಶಿಕ್ಷಕರು ಮಾಡುವ ಪಾಠವನ್ನು ಏಕಾಗ್ರತೆಯಿಂದ ಕೇಳಿದರೆ ಉತ್ತಮ ಅಂಕ ಪಡೆಯಬಹುದು. ಹಾಗಾಗಿ,ವಿದ್ಯಾರ್ಥಿಗಳು ಪಾಠಗಳನ್ನು ಗಮನವಿಟ್ಟುಆಲಿಸಬೇಕು ಹಾಗೂ ಅಂದಿನ ಪಾಠವನ್ನು ಅಂದೇ ಓದಿಕೊಳ್ಳಬೇಕೆಂದು ಶಾಸಕ ಹಾಗೂ ಅನುಸೂಚಿತಜಾತಿ ಮತ್ತು ಅನುಸೂಚಿತ ಪಂಗಡಗಳ ಆಯೋಗದ ಅಧ್ಯಕ್ಷ ನೆಹರು ಓಲೇಕಾರ ಹೇಳಿದರು.

Advertisement

ನಗರದ ಸಿ.ಬಿ.ಕೊಳ್ಳಿ ಪಾಲಿಟೆಕ್ನಿಕ್‌ ಕಾಲೇಜುಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂಸಿ.ಬಿ.ಕೊಳ್ಳಿ ಪಾಲಿಟೆಕ್ನಿಕ್‌ ಕಾಲೇಜು ಆಶ್ರಯದಲ್ಲಿಏರ್ಪಡಿಸಿದ್ದ 2020-21ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ “ಹತ್ತರ ಭಯ-ಹತ್ತಿರ ಬೇಡ’ ಒಂದು ದಿನದ ಪ್ರೇರಣಾ ಕಾರ್ಯಾಗಾರ ಉದ್ಘಾಟಿಸಿಮಾತನಾಡಿದರು.

ವಿದ್ಯಾರ್ಥಿಗಳು ಪರೀಕ್ಷೆಗೆ ಕಾಲಾವಕಾಶವಿದೆಎಂಬ ಕಾರಣದಿಂದ ಕಾಲಹರಣ ಮಾಡದೇದಿನನಿತ್ಯ ಓದಿನಲ್ಲಿ ತೊಡಿಸಿಕೊಳ್ಳಬೇಕು. ಪಾಠಕೇಳಿದ ಅನುಭವ ಹಾಗೂ ಓದಿದ ಅನುಭವಇದ್ದರೆ ಶೇ.90 ರಷ್ಟು ಅಂಕ ಪಡೆಯಬಹುದು.ಸರ್ಕಾರ ಶಿಕ್ಷಣಕ್ಕೆ ಎಲ್ಲ ಸೌಲಭ್ಯಗಳನ್ನು ನೀಡಿದೆ. ಆಸೌಲಭ್ಯಗಳನ್ನು ಸಮಪರ್ಕವಾಗಿ ಬಳಸಿಕೊಳ್ಳಬೇಕು.ಇಂದಿನ ಮಕ್ಕಳು ನಾಳಿನ ನಾಗರಿಕರು, ದೇಶದ ಭವಿಷ್ಯ ಬರೆಯುವ ಮಕ್ಕಳಾಗಿದ್ದಾರೆ. ಮುಂದಿನ ದಿನಗಳಲ್ಲಿ ಒಳ್ಳೆಯ ವಿಜ್ಞಾನಿ, ಶಿಕ್ಷಕರು, ವಕೀಲರುಆಗಬಹುದು. ಹಾಗಾಗಿ, 10ನೇ ತರಗತಿ ಪರೀಕ್ಷೆಯಸುಸಂದರ್ಭದಲ್ಲಿ ಉತ್ತಮ ಅಂಕ ಪಡೆಯಲು ಈಗಿನಿಂದಲೇ ತಯಾರಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಿಕ್ಷಕರು ಮಕ್ಕಳಿಗೆ ಧೈರ್ಯ ತುಂಬುವ ಕೆಲಸಮಾಡಬೇಕು. ಇಂತಹ ಕಾರ್ಯಕ್ರಮಗಳನ್ನುಮಕ್ಕಳಿಂದ ಮಾಡಿಸಬೇಕು. ಇದರಿಂದಮಕ್ಕಳಲ್ಲಿ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ. ಮಕ್ಕಳಿಗೆಕಾರ್ಯಕ್ರಮಗಳ ನಿರ್ವಹಣೆ ಕುರಿತು ಪ್ರಾಥಮಿಕತರಬೇತಿ ನೀಡಿದಲ್ಲಿ ಶೈಕ್ಷಣಿಕ ಅಭಿವೃದ್ಧಿಯಾಗಲುಸಾಧ್ಯ. ಅನೇಕ ಪ್ರತಿಭಾವಂತ ಮಕ್ಕಳಿದ್ದಾರೆ. ಅವರನ್ನು ಪ್ರೋತ್ಸಾಹಿಸಬೇಕು. ಗುಡಿಸಲಿನಲ್ಲಿರುವ ಮಕ್ಕಳುಸಾಧನೆ ಮಾಡಿದ ಅನೇಕ ಉದಾಹರಣೆಗಳಿವೆ. ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಬಡತನದಲ್ಲಿ ಓದಿಜಗತ್ತಿನಲ್ಲಿ ಧೃವತಾರೆಯಾಗಿ ಬಿಂಬಿಸುತ್ತಿದ್ದಾರೆ. ವಿದ್ಯೆಯಾರ ಸ್ವತ್ತಲ್ಲ. ಶ್ರದ್ಧೆಯಿಂದ ಓದಿದರೆ ಉತ್ತಮ ಅಂಕಪಡೆಯಬಹುದು ಎಂದು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕಅಂದಾನಪ್ಪ ವಡಗೇರಿ ಮಾತನಾಡಿ, ಎಸ್ಸೆಸ್ಸೆಲ್ಸಿಮಕ್ಕಳಿಗೆ ಧೈರ್ಯ ತುಂಬಲು ಈ ಕಾರ್ಯಾಗಾರಆಯೋಜಿಸಲಾಗಿದೆ. ಮಕ್ಕಳು ಪಾಠಗ್ರಹಿಸುವುದನ್ನು ರೂಢಿಸಿಕೊಳ್ಳಬೇಕು. ಓದಿದ್ದನ್ನುನೆನಪಿನಲ್ಲಿಟ್ಟುಕೊಳ್ಳಬೇಕು ಹಾಗೂ ಬರೆಯಬೇಕು.ಬೇರೆ ವಿದ್ಯಾರ್ಥಿಗಳ ಜೊತೆ ಹೋಲಿಕೆ ಕೈಬಿಟ್ಟುನಮ್ಮದೇ ಆದ ಶೈಲಿಯಲ್ಲಿ ಓದಬೇಕು. ವಿದ್ಯಾರ್ಥಿಗಳು ಕೀಳರಿಮೆ ಬಿಡಬೇಕು ಹಾಗೂ ಓದಿನಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

Advertisement

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್‌.ಪಾಟೀಲ, ಧೈಹಿಕ ಶಿಕ್ಷಣಾ ಧಿಕಾರಿ ನಾಗರಾಜಇಚ್ಚಂಗಿ, ಬೆಳಗಾವಿ ಕೆಎಲ್‌ಇ ಸಂಸ್ಥೆ ಆಡಳಿತ ಮಂಡಳಿ ಸದಸ್ಯ ಎಂ.ಸಿ.ಕೊಳ್ಳಿ, ಪ್ರಾಚಾರ್ಯ ಚನ್ನಪ್ಪಬಿ., ಸಮನ್ವಯಾಧಿ ಕಾರಿ ಸಿ.ಎಸ್‌.ಭಗವಂತಗೌಡ್ರ ಇತರರು ಭಾಗವಹಿಸಿದ್ದರು.

ಗುಡಿಸಲಿನಲ್ಲಿರುವ ಮಕ್ಕಳು ಸಾಧನೆ ಮಾಡಿದಅನೇಕ ಉದಾಹರಣೆಗಳಿವೆ. ಡಾ|ಬಿ.ಆರ್‌.ಅಂಬೇಡ್ಕರ್‌ ಅವರು ಬಡತನದಲ್ಲಿ ಓದಿ ಜಗತ್ತಿನಲ್ಲಿಧೃವತಾರೆಯಾಗಿ ಬಿಂಬಿಸುತ್ತಿದ್ದಾರೆ. ವಿದ್ಯೆ ಯಾರಸ್ವತ್ತಲ್ಲ. ಶ್ರದ್ಧೆಯಿಂದ ಓದಿದರೆ ಉತ್ತಮ ಅಂಕಪಡೆಯಬಹುದು. – ನೆಹರು ಓಲೇಕಾರ, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next