Advertisement

ಖಾಸಗಿ ಹಕ್ಕು ತೀರ್ಪು ಓದಿ, ಬಳಿಕ ಆಧಾರ್‌ ವಿಚಾರಣೆ

09:40 AM Aug 30, 2017 | Harsha Rao |

ಹೊಸದಿಲ್ಲಿ: ಆಧಾರ್‌ ಕುರಿತ ವಿಚಾರಣೆಗೆ ಮುನ್ನ ಇತ್ತೀಚೆಗೆ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ನೀಡಿದ ಖಾಸಗಿ ಹಕ್ಕು ಕುರಿತ ತೀರ್ಪನ್ನು ಕೂಲಂಕಷ ಪರಿಶೀಲನೆ ನಡೆಸುವುದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ. 

Advertisement

ಆಧಾರ್‌ ಕಾಯ್ದೆಯನ್ನು ಹಣಕಾಸು ಮಸೂದೆಯಾಗಿ ಪ್ರಮಾಣೀಕರಿಸುವ ಲೋಕಸಭಾ ಸ್ಪೀಕರ್‌ ತೀರ್ಮಾನದ ವಿರುದ್ಧ ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌ ಸಲ್ಲಿಸಿದ ಅರ್ಜಿ ಕುರಿತಂತೆ ಕೋರ್ಟ್‌ ಹೀಗೆ ಹೇಳಿದೆ. ಅರ್ಜಿಯ ತ್ವರಿತ ವಿಚಾರಣೆಗೆ ಕೇಳಿಕೊಳ್ಳಲಾಗಿದ್ದು, ಈ ವೇಳೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ನ್ಯಾಯಪೀಠ ಮೊದಲು ಖಾಸಗಿತನ ಮೂಲಭೂತ ಹಕ್ಕು ಎಂಬ ಬಗ್ಗೆ ನೀಡಿದ ತೀರ್ಪು ಓದುವುದಾಗಿ ಹೇಳಿತು. ಕಳೆದ ವರ್ಷ ಮಾ.11ರಂದು ಆಧಾರ್‌ ಮಸೂದೆ ಪಾಸಾ ಗಿದ್ದು, ಮಾ.16ರಂದು ರಾಜ್ಯಸಭೆಯಲ್ಲಿ ಮಂಡನೆಯಾಗಿತ್ತು. ಆದರೆ ಇದಕ್ಕೆ ಹಲವು ತಿದ್ದುಪಡಿಗಳನ್ನು ಮಾಡಲಾಗಿತ್ತು. ಬಳಿಕ ಮತ್ತೆ ಲೋಕಸಭೆಯಲ್ಲಿ ಮಂಡನೆಯಾದಾಗ ಎಲ್ಲ ತಿದ್ದುಪಡಿಗಳನ್ನು ತಿರಸ್ಕರಿಸಿ, ಯಥಾವತ್ತಾಗಿ ಅಂಗೀಕರಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next