Advertisement

ಮಿತಿ ಹೆಚ್ಚಳ ಪ್ರಸ್ತಾಪಕ್ಕೆ ಆರ್‌ಬಿಐ ತಿರಸ್ಕಾರ

03:45 AM Jan 30, 2017 | Team Udayavani |

ನವದೆಹಲಿ: ಐದು ರಾಜ್ಯಗಳಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳಿಗೆ ಪ್ರತಿ ವಾರಕ್ಕೆ 24 ಸಾವಿರ ರೂಪಾಯಿಗಳ ಬದಲಾಗಿ 2 ಲಕ್ಷ ರೂಪಾಯಿ ವಿಥ್‌ಡ್ರಾ ಮಾಡಲು ಅವಕಾಶ ನೀಡಬೇಕೆಂಬ ಕೇಂದ್ರ ಚುನಾವಣಾ ಆಯೋಗದ ಮನವಿಯನ್ನು ಆರ್‌ಬಿಐ ತಿರಸ್ಕರಿಸಿದೆ. ಅಂಥ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಕಳೆದ ಬುಧವಾರ ಆಯೋಗ ಮಾಡಿದ್ದ ಮನವಿಗೆ ಉತ್ತರಿಸಿದೆ. ಈ ಬಗ್ಗೆ ಆರ್‌ಬಿಐ ಗವರ್ನರ್‌ಗೆ ಮಾರೋಲೆ ಬರೆದಿರುವ  ಬರೆದಿರುವ ಕೇಂದ್ರ ಚುನಾವಣಾ ಆಯೋಗ ಮನವಿ ಪರಿಶೀಲಿಸಿದ ರೀತಿಗೆ ಆಕ್ಷೇಪ ವ್ಯಕ್ತಪಡಿಸಿದೆ. ಪರಿಸ್ಥಿತಿಯ ಗಂಭೀರತೆಯನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಅರ್ಥ ಮಾಡಿಕೊಂಡಂತೆ ಇಲ್ಲ. ಎಲ್ಲ ಅಭ್ಯರ್ಥಿಗಳಿಗೂ ಸಮಾನ ಅವಕಾಶ ಕಲ್ಪಿಸಿಕೊಟ್ಟು ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸುವ ಹೊಣೆಗಾರಿಕೆ ಆಯೋಗದ ಮೇಲಿದೆ ಎಂದು ಪತ್ರದಲ್ಲಿ ಆಯೋಗ ಆಕ್ಷೇಪಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next