Advertisement

ಷೇರು ಪೇಟೆಗೆ ಆರ್‌ಬಿಐ ಪುನಃಶ್ಚೇತನ

12:29 AM May 06, 2021 | Team Udayavani |

ಮುಂಬಯಿ/ಹೊಸದಿಲ್ಲಿ: ಸತತ ಮೂರು ದಿನಗಳಿಂದ ಹೂಡಿಕೆದಾರರಿಗೆ ಉಂಟಾಗುತ್ತಿದ್ದ ನಷ್ಟಕ್ಕೆ ಬುಧವಾರ ಕೊಂಚ ತಡೆ ಬಿದ್ದಿದೆ. ಆರ್‌ಬಿಐ ಪ್ರಕಟಿಸಿದ ಆರ್ಥಿಕ ಪುನಃಶ್ಚೇತನ ಕ್ರಮಗಳಿಂದಾಗಿ ಬಿಎಸ್‌ಇ ಸೂಚ್ಯಂಕ 424.04 ಪಾಯಿಂಟ್ಸ್‌ ಏರಿಕೆಯಾಗಿದೆ.

Advertisement

ಬ್ಯಾಂಕಿಂಗ್‌, ಮಾಹಿತಿ ತಂತ್ರಜ್ಞಾನ ಕ್ಷೇತ್ರ, ಔಷಧೋದ್ಯಮ ಕ್ಷೇತ್ರದ ಷೇರುಗಳಿಗೆ ಹೆಚ್ಚಿನ ಬೇಡಿಕೆ ಉಂಟಾಯಿತು. ಇದರಿಂದಾಗಿ ದಿನಾಂತ್ಯಕ್ಕೆ ಸೂಚ್ಯಂಕ 48,677.55ರಲ್ಲಿ ಮುಕ್ತಾಯವಾಯಿತು. ನಿಫ್ಟಿ ಸೂಚ್ಯಂಕ 121.35 ಪಾಯಿಂಟ್ಸ್‌ಗಳಷ್ಟು ಜಿಗಿತ ಕಂಡು, ಸೂಚ್ಯಂಕ 14,617.85ರಲ್ಲಿ ಮುಕ್ತಾಯವಾಯಿತು.

2 ಪೈಸೆ ಕುಸಿತ: ಅಮೆರಿಕದ ಡಾಲರ್‌ ಎದುರು ರೂಪಾಯಿ 2 ಪೈಸೆ ಕುಸಿತ ಕಂಡಿದೆ. 73.80 ರೂ.ಗಳಿಂದ ವಹಿವಾಟು ಆರಂಭವಾಗಿ ದಿನಾಂತ್ಯಕ್ಕೆ 73.91 ರೂ.ಗಳಿಗೆ ಮುಕ್ತಾಯವಾ ಗಿದೆ. ಸೋಮವಾರ ಮತ್ತು ಮಂಗಳವಾರ ಡಾಲರ್‌ ಎದುರು ರೂಪಾಯಿ ಪ್ರಬಲವಾಗಿಯೇ ಚೇತರಿಸಿ ಕೊಂಡಿತ್ತು.

ಚಿನ್ನ ದರ ಕುಸಿತ: ಹೊಸದಿಲ್ಲಿ ಚಿನಿವಾರ ಮಾರು ಕಟ್ಟೆಯಲ್ಲಿ ಬುಧವಾರ ಚಿನ್ನದ ಬೆಲೆ 317 ರೂ. ಇಳಿಕೆಯಾಗಿದೆ. ಹೀಗಾಗಿ, ಪ್ರತೀ 10 ಗ್ರಾಂ ಚಿನ್ನಕ್ಕೆ 46,382 ರೂ.ಗೆ ಮುಕ್ತಾಯವಾಗಿದೆ. ಮಂಗಳವಾರ 46,699 ರೂ. ಆಗಿತ್ತು. ಆದರೆ ಪ್ರತೀ ಕೆ.ಜಿ. ಬೆಳ್ಳಿಯ ದರ 2,328 ರೂ. ಏರಿಕೆಯಾಗಿದ್ದು, 70,270 ರೂ. ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಳವಣಿಗೆಯಿಂದಾಗಿ ಹೀಗಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next