Advertisement

ಶಾಸಕ ಪಾಟೀಲ್‌ ಅಹಂಕಾರ ಬಿಟ್ಟು ಕ್ಷಮೆಯಾಚಿಸಲಿ

03:06 PM Oct 17, 2021 | Team Udayavani |

ರಾಯಚೂರು: ಜನಸೇವೆ ಮಾಡಬೇಕಿದ್ದಶಾಸಕ ಡಾ| ಶಿವರಾಜ್‌ ಪಾಟೀಲ್‌ ನಾನುರಾಯಚೂರಿನ ಬಾದಶಾ ಎನ್ನುವ ಅಹಂಕಾರದಮಾತುಗಳನ್ನಾಡಿ ಮತದಾರರಿಗೆ ಅಪಮಾನಮಾಡಿದ್ದಾರೆ.

Advertisement

ಮೂರು ದಿನದೊಳಗೆ ಅವರುಜನತೆಯ ಕ್ಷಮೆಯಾಚಿಸಬೇಕು ಎಂದುಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕಬಸವರಾಜ ಕಳಸ ಒತ್ತಾಯಿಸಿದರು.ನಗರದ ಪತ್ರಿಕಾ ಭವನದಲ್ಲಿ ಶನಿವಾರಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಜನನಾಯಕರಾದವರು ಅರಸೊತ್ತಿಗೆಮಾತನ್ನಾಡುವುದು ಸರಿಯಲ್ಲ.

ಪ್ರಜೆಗಳಸೇವೆ ಮಾಡುವ ಮುನ್ನ ಜವಾಬ್ದಾರಿಯಿಂದನಡೆದುಕೊಳ್ಳಬೇಕು. ಕಾರ್ಯಕ್ರಮದಲ್ಲಿಬಹಿರಂಗವಾಗಿ “ನಾನು ರಾಯಚೂರಿನಬಾದಶಾ’ ಎಂದು ಹೇಳುವ ಮೂಲಕ ಜನರಿಗೆಅಪಮಾನ ಮಾಡಿದ್ದಾರೆ. ಶಿಸ್ತಿನ ಪಕ್ಷ ಎನ್ನುವಬಿಜೆಪಿ ಇದನ್ನೆಲ್ಲ ಗಮನಿಸುವುದಿಲ್ಲವೇ ಎಂದು ಪ್ರಶ್ನಿಸಿದರು.

ಇದೇ ಮೊದಲಲ್ಲ ಏಮ್ಸ್‌ ಹೋರಾಟದವಿಚಾರದಲ್ಲಿಯೂ ಅವರು ಹೋರಾಟಗಾರರಜತೆ ಅನುಚಿತವಾಗಿ ನಡೆದುಕೊಂಡಿದ್ದಾರೆ.ಏಕವಚನದಲ್ಲಿ ಹೋಗು ಬಾ ಎಂದು ಬಹಳಅಗೌರವದಿಂದ ನಡೆದುಕೊಂಡಿದ್ದಾರೆ. ಪ್ರಧಾನಿನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರೇ ನಾವು ಸಾಮಾನ್ಯವ್ಯಕ್ತಿಗಳು ಎಂದು ಹೇಳಿಕೊಳ್ಳುವಾಗ ಶಾಸಕಪಾಟೀಲ್‌ ನಾನೊಬ್ಬ ಬಾದಶಾ ಎನ್ನುವುದುಖಂಡನೀಯ ಎಂದು ದೂರಿದರು.

ರಾಯಚೂರು ಈವರೆಗೆ ಅನೇಕಶಾಸಕರನ್ನು, ಮಂತ್ರಿಗಳನ್ನು ಕಂಡಿದೆ. ಆದರೆ,ಯಾರು ಕೂಡ ಈ ರೀತಿ ಅತಿರೇಕದವರ್ತನೆಯಾಗಲಿ, ಮಿತಿಮೀರಿದಹೇಳಿಕೆಗಳನ್ನಾಗಲಿ ನೀಡಿಲ್ಲ. ಮೂರುದಿನದೊಳಗೆ ಅವರು ಕ್ಷಮೆಯಾಚಿಸದಿದ್ದರೆಈ ಕುರಿತು ಬಿಜೆಪಿ ಶಿಸ್ತು ಸಮಿತಿಗೆ ದೂರುನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.

Advertisement

ರಾಯಚೂರು ಜಿಲ್ಲೆ ಅಭಿವೃದ್ಧಿ ಆಗಿಲ್ಲ ಎಂದುತೆಲಂಗಾಣಕ್ಕೆ ಸೇರಿಸಿ ಎನ್ನುವುದಲ್ಲ. ಅವರುತಮ್ಮ ಆಕ್ರೋಶವನ್ನು ಸದನದಲ್ಲಿ ತೋರಿಸಲಿ.ಎಂದಾದರೂ ಈ ಬಗ್ಗೆ ಮಾತನಾಡಿದ್ದಾರಾ.ಜಿಲ್ಲೆಗೆ ಬಂದ ಸಚಿವರ ಎದುರು ಪ್ರಾಬಲ್ಯತೋರಲು ಬೇಕಾಬಿಟ್ಟಿ ಹೇಳಿಕೆ ನೀಡುವುದಲ್ಲ.ಏಮ್ಸ್‌ ವಿಚಾರದಲ್ಲಿ ಎಂದಾದರೂ ಹೇಳಿಕೆನೀಡಿದ್ದಾರೆಯೇ ಎಂದು ಪ್ರಶ್ನಿಸಿದರು.ಕರವೇ (ಶಿವರಾಮಗೌಡ ಬಣ)ಜಿಲ್ಲಾಧ್ಯಕ್ಷ ಅಶೋಕ ಕುಮಾರ್‌ ಜೈನ್‌ಮಾತನಾಡಿ, ರಾಯಚೂರನ್ನು ತೆಲಂಗಾಣಕ್ಕೆಸೇರಿಸುವುದಾಗಿ ಹೇಳುವ ಶಾಸಕರಿಗೆ ನೈತಿಕತೆಇದೆಯೇ. ಯಾರಪ್ಪನ ಸ್ವತ್ತು ಎಂದು ಇವರುಆ ರೀತಿ ಹೇಳಿಕೆ ನೀಡುತ್ತಾರೆ.

ಅಭಿವೃದ್ಧಿ ಬಗ್ಗೆಮಾತನಾಡುವವರು ಸದನದಲ್ಲಿ ಮಾತನಾಡಲಿ.ಇಲ್ಲಿ ಜನರ ಎದುರು ಶೋಕಿಗಾಗಿಹೇಳುವುದಲ್ಲ. ಕನ್ನಡ ನಾಡು, ನುಡಿ, ಜಲಕ್ಕಾಗಿಕನ್ನಡಪರ ಸಂಘಟನೆಗಳು ಜೀವ ಪಣಕ್ಕಿಟ್ಟುಹೋರಾಟ ಮಾಡಿದರೆ, ಇವರು ಮನಸಿಗೆಬಂದಂತೆ ಮಾತನಾಡುವುದು ಸರಿಯಲ್ಲ.ಶಾಸಕರು ತಮ್ಮ ಹೇಳಿಕೆ ಹಿಂಪಡೆದು ಜನರಕ್ಷಮೆಯಾಚಿಸಲಿ ಎಂದರು.ಸಂಘಟನೆ ಮುಖಂಡರಾದ ಶರಣಪ್ಪಅಸ್ಕಿಹಾಳ, ರಾಜಶೇಖರ ಮಾಚರ್ಲಾ,ಮಹ್ಮದ್‌ ಮಾಸೂಮ್‌ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next