Advertisement

ವೈದ್ಯರ ತಪಾಸಣೆಗೆ ಹೋಗುತ್ತಿದ್ದವರಿಗೆ ಯಮನಾದ ಲಾರಿ: ಒಂದೇ ಕುಟುಂಬದ ಮೂವರ ದುರ್ಮರಣ

08:13 AM Apr 25, 2020 | keerthan |

ರಾಯಚೂರು: ಗರ್ಭಿಣಿ ಪತ್ನಿಯ ಆರೋಗ್ಯ ತಪಾಸಣೆಗಾಗಿ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಲಾರಿ ಢಿಕ್ಕಿ ಹೊಡೆದು ಪತಿ, ಪತ್ನಿ, ಮಗಳು ಮೃತಪಟ್ಟ ದಾರುಣ ಘಟನೆ ಸಿಂಧನೂರು ತಾಲೂಕಿನ ಉಮಲೂಟಿ ಗ್ರಾಮದ ಹತ್ತಿರ ನಡೆದಿದೆ.

Advertisement

ಮಾಟೂರು ಗ್ರಾಮದ ಪರಸಪ್ಪ (35), ಪತ್ನಿ ಕನಕಮ್ಮ (28), ಪುತ್ರಿ ನಾಗಮ್ಮ (2) ಮೃತ ದುರ್ದೈವಿಗಳು. ಪರಸಪ್ಪನ ಪತ್ನಿ ಕನಕಮ್ಮ ಗರ್ಭಿಣಿಯಾಗಿದ್ದು, ತವರು ಮನೆ ಚಿಕ್ಕಬೇರ್ಗಿ ಗ್ರಾಮಕ್ಕೆ ಬಂದಿದ್ದಳು.

ಈಕೆಯ ಆರೋಗ್ಯ ತಪಾಸಣೆಗೆ ಇಲಕಲ್ ಗೆ ಹೋಗುವಾಗ ಲಾರಿ ಡಿಕ್ಕಿ ಹೊಡೆದಿದೆ. ಲಾರಿ ಚಾಲಕ ಪರಾರಿಯಾಗಿದ್ದಾನೆ. ಈ ಕುರಿತು ತುರುವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next