Advertisement

ಕೋವಿಡ್-19 ಸೋಂಕಿನ ಮಿತ್ರರಂತೆ ವರ್ತಿಸುವ ಜಮೀರ್ ರನ್ನು ಕೂಡಲೇ ಬಂಧಿಸಬೇಕು: ಎನ್.ರವಿಕುಮಾರ್

08:13 AM Apr 23, 2020 | keerthan |

ಬೆಂಗಳೂರು: ಶಾಸಕ ಜಮೀರ್ ಅಹಮ್ಮದ್ ಖಾನ್ ಅವರು ಕೋವಿಡ್-19 ವೈರಾಣುವಿನ ಮಿತ್ರರಂತೆ ವರ್ತಿಸುತ್ತಿದ್ದು, ಕೂಡಲೇ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಆಗ್ರಹಿಸಿದರು.

Advertisement

ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್-19 ಸೋಂಕು ನಿಯಂತ್ರಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆದರೆ ಅವರ ಪರವಾಗಿ ದನಿ ಎತ್ತದ ಜಮೀರ್ ಅಹಮ್ಮದ್ ಖಾನ್ ಹಲ್ಲೆ ನಡೆಸಿದವರ ಪರ ನಿಲ್ಲುತ್ತಾರೆ. ಕ್ವಾರೆಂಟೈನ್ ಮಾಡಲು ಹೋದ ಬಿಬಿಎಂಪಿ ಅಧಕಾರಿಗಳ ಮೇಲೆ ಹಲ್ಲೆ ನಡೆದರೂ ಅತ್ತ ಸುಳಿಯಲಿಲ್ಲ. ಈ ರೀತಿ ಕೋವಿಡ್-19 ವೈರಾಣುವಿನ ಮಿತ್ರರಂತೆ ವರ್ತಿಸುತ್ತಿರುವ ಜಮೀರ್ ಅಹಮ್ಮದ್ ಖಾನ್ ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು

Advertisement

Udayavani is now on Telegram. Click here to join our channel and stay updated with the latest news.

Next