Advertisement

ರವಿ ಶಾಸ್ತ್ರೀ ಕೋಚ್ ಹುದ್ದೆಗೆ ಕಂಟಕ; ಮತ್ತೆ ನಡೆಯಲಿದೆಯೇ ಕೋಚ್ ಆಯ್ಕೆ?

09:57 AM Sep 30, 2019 | Team Udayavani |

ಹೊಸದಿಲ್ಲಿ: ಮಹತ್ತರ ಬೆಳವಣಿಗೆಯಲ್ಲಿ ಟೀಂ ಇಂಡಿಯಾ ಮುಖ್ಯ ಕೋಚ್ ರವಿ ಶಾಸ್ತ್ರೀ ಅವರ ಹುದ್ದೆಗೆ ಕಂಟಕ ಎದುರಾಗಿದೆ. ಯಾಕೆಂದರೆ ರವಿ ಶಾಸ್ತ್ರೀ ಅವರನ್ನು ಕೋಚ್ ಆಗಿ ಆಯ್ಕೆ ಮಾಡಿದ ತಂಡಕ್ಕೆ ಸ್ವಹಿತಾಸಕ್ತಿ ಸಂಘರ್ಷ ಎದುರಾಗಿದೆ.

Advertisement

ಕ್ರಿಕೆಟ್ ಸಲಹಾ ಸಮಿತಿಯಲ್ಲಿದ್ದ ಕಪಿಲ್ ದೇವ್, ಅಂಶುಮಾನ್ ಗಾಯಕ್ವಾಡ್ ಮತ್ತು ಶಾಂತಾ ರಂಗಸ್ವಾಮಿ ಹಲವರನ್ನು ಸಂದರ್ಶಿಸಿ ನಂತರ ರವಿ ಶಾಸ್ತ್ರೀ ಅವರನ್ನೇ ಕೋಚ್ ಆಗಿ ಪುನರಾಯ್ಕೆ ಮಾಡಿದ್ದರು.

ಬಿಸಿಸಿಐನ ನೈತಿಕ ಅಧಿಕಾರಿ ಡಿ.ಕೆ ಜೈನ್ ಈ ಮೂವರಿಗೆ ನೋಟಿಸ್ ಕಳುಹಿಸಿದ್ದು, ಅಕ್ಟೋಬರ್ 10ರ ರೊಳಗೆ ಉತ್ತರಿಸುವಂತೆ ಹೇಳಿದ್ದಾರೆ.

ಒಬ್ಬ ವ್ಯಕ್ತಿ ಒಂದು ಹುದ್ದೆ ಎಂಬ ಕಾನೂನು ಬಿಸಿಸಿಐನಲ್ಲಿದೆ. ಇದರ ಪ್ರಕಾರ ಒಬ್ಬ ವ್ಯಕ್ತಿ ಆದಾಯತರುವ ಒಂದಕ್ಕಿಂತ ಹೆಚ್ಚು ಹುದ್ದೆಗಳನ್ನು ಹೊಂದುವಂತಿಲ್ಲ.

ಒಂದು ವೇಳೆ ಸ್ವಹಿತಾಸಕ್ತಿ ಸಂಘರ್ಷ ಕಂಡು ಬಂದಲ್ಲಿ ಕೋಚ್ ಆಯ್ಕೆ ಮತ್ತೆ ನಡೆಯಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next