Advertisement

ರಾವಿ ನದಿ ಅಣೆಕಟ್ಟಿಗೆ ಅಸ್ತು

06:00 AM Dec 08, 2018 | |

ನವದೆಹಲಿ: ಪಂಜಾಬ್‌ನಲ್ಲಿ ರಾವಿ ನದಿಗೆ ಶಾಹಪುರ ಕಂಡಿ ಅಣೆಕಟ್ಟೆ ನಿರ್ಮಾಣ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಇದರಿಂದಾಗಿ ಪಾಕಿಸ್ತಾನಕ್ಕೆ ಹರಿ ಯುವ ನೀರಿನ ಪ್ರಮಾಣ ಕಡಿಮೆಯಾಗಲಿದೆ. ಭಾರತದ ವಿರುದ್ಧ ಭಯೋತ್ಪಾದಕರನ್ನು ಛೂ ಬಿಡುವ ಪಾಕಿಸ್ತಾನಕ್ಕೆ ಭಾರತ ಈ ಮೂಲಕ ತಕ್ಕ ಪಾಠ ಕಲಿಸಲಿದ್ದು, 2022 ಕ್ಕೆ ಈ ಯೋಜನೆ ಪೂರ್ಣಗೊಳ್ಳಲಿದೆ. ಇದ ರಿಂದಾಗಿ ಜಮ್ಮು ಕಾಶ್ಮೀರ ಹಾಗೂ ಪಂಜಾಬ್‌ ಪ್ರಾಂತ್ಯದಲ್ಲಿನ ರೈತರಿಗೆ ಭಾರಿ ಅನುಕೂಲವಾಗಲಿದೆ.

Advertisement

ಈ ಯೋಜನೆ ತುಂಬಾ ಹಳೆಯದಾಗಿದ್ದರೂ, ಕಳೆದ 17 ವರ್ಷಗಳಿಂದಲೂ ನನೆ ಗುದಿಗೆ ಬಿದ್ದಿತ್ತು. 2000ನೇ ಇಸ್ವಿಯಲ್ಲಿ 2,285 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲು ಅನುಮೋದನೆ ನೀಡಲಾಗಿತ್ತಾದರೂ, ಅನುದಾನದ ಕೊರತೆಯಿಂದ ನನೆ ಗುದಿಗೆ ಬಿದ್ದಿತ್ತು. ಈಗ ಕೇಂದ್ರ ಸರ್ಕಾರ ಈ ಯೋಜನೆಯ ಅಡಿಯಲ್ಲಿ ನೀರಾವರಿ ವ್ಯವಸ್ಥೆ ಕಲ್ಪಿಸುವುದಕ್ಕಾಗಿ 485 ಕೋಟಿ ರೂ. ಒದಗಿಸಲಿದೆ. 

1960ರ ಸಿಂಧೂ ನದಿ ನೀರು ಒಪ್ಪಂದ ವನ್ನು ಭಾರತ ಮತ್ತು ಪಾಕಿಸ್ತಾನ ಮಾಡಿ ಕೊಂಡಿದ್ದು, ಇದರ ಅಡಿಯಲ್ಲಿ ರಾವಿ, ಬಿಯಾಸ್‌ ಮತ್ತು ಸಟ್ಲೆಜ್‌ ನದಿಯ ನೀರನ್ನು ಭಾರತ ಬಳಕೆ ಮಾಡಿಕೊಳ್ಳಲು ಸಂಪೂರ್ಣ ಹಕ್ಕನ್ನು ಹೊಂದಿದೆ. ಹೀಗಾಗಿ ರಾವಿ ನದಿಗೆ ಅಣೆಕಟ್ಟೆ ನಿರ್ಮಾಣ ಮಾಡಲು ಪಾಕಿಸ್ತಾನ ಯಾವ ಆಕ್ಷೇಪವನ್ನೂ ವ್ಯಕ್ತಪಡಿಸುವಂತಿಲ್ಲ. 

ಈ ಯೋಜನೆಯಿಂದ ಜಮ್ಮು ಕಾಶ್ಮೀರದ ಸುಮಾರು 5 ಸಾವಿರ ಹೆಕ್ಟೇರುಗಳಿಗೆ ಹೆಚ್ಚು ವರಿ ನೀರಾವರಿ ಸೌಲಭ್ಯ ಸಿಗಲಿದೆ. ಅಷ್ಟೇ ಅಲ್ಲ, ಪಂಜಾಬ್‌ಗ ಈ ಯೋಜನೆಯಿಂದ 206 ಮೆ.ವ್ಯಾ ವಿದ್ಯುತ್‌ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next