Advertisement

ಅಜ್ಞಾನ,ದೌರ್ಜನ್ಯದಿಂದ ಪಾರು ಮಾಡಿ, ಕಷ್ಟಕ್ಕೆ ಅನುಕೂಲವಾಗುವುದೇ ಶಿಕ್ಷಣ

07:05 PM Oct 02, 2021 | Team Udayavani |

ಬೈಲಹೊಂಗಲ: ಜನರನ್ನು ಅಜ್ಞಾನದಿಂದ, ದೌರ್ಜನ್ಯದಿಂದ ಪಾರು ಮಾಡಿ, ಕಷ್ಟ ಕಾಲಕ್ಕೆ ಅನುಕೂಲ ಕಲಿಸುವದೇ ಶಿಕ್ಷಣವಾಗಿದೆ ಎಂದು ಹಿರಿಯ ಐಪಿಎಸ್ ಅಧಿಕಾರಿ ರವಿ ಚನ್ನಣ್ಣವರ್  ಹೇಳಿದರು.

Advertisement

ಚಚಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ಶನಿವಾರ ನಡೆದ ಉಚಿತ ಸ್ಪರ್ಧಾತ್ಮಕ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ, ಗಣ್ಯರ ಸತ್ಕಾರ ಸಮಾರಂಭದಲ್ಲಿ ಮಾತನಾಡಿ, ನಾವು ಸರಕಾರಿ ಹುದ್ದೆ ಸೇರಿದ ಮೇಲೆ ಇತರರು ನಮ್ಮಂತೆ ಮುಂದೆ ಒಳ್ಳೆಯ ಅಧಿಕಾರಿಯಾಗಲು ಮಾರ್ಗದರ್ಶನ ಮಾಡುವುದು ಒಬ್ಬ ಒಳ್ಳೆಯ ವ್ಯಕ್ತಿಯ ಆದ್ಯ ಜವಾಬ್ದಾರಿಯಾಗಿದೆ.ನಮಗೆ ಸಿಗುವ ಸೌಲಭ್ಯಗಳು ಎಲ್ಲರಿಗೂ ಸಿಗಬೇಕೆಂಬ ಕನಸನ್ನು ಪ್ರತಿಯೊಬ್ಬ ಅಧಿಕಾರಿಯ ಕರ್ತವ್ಯವೆಂದು ತಿಳಿಯಬೇಕು. ಜನರನ್ನು ಕಚೇರಿಯಿಂದ ಕಚೇರಿಗೆ ಅಲೆಯುವದನ್ನು ತಪ್ಪಿಸಲು ಮನೆಬಾಗಿಲಿಗೆ ಹೋಗಿ ಅವರ ಕೆಲಸಗಳನ್ನು ಮಾಡಿಕೊಡಬೇಕೆಂದು ತಿಳಿಸಿದರು.

ನಾವಷ್ಟೇ ಓದುವಂತಾಗಬಾರದು. ನೂರಾರು ಜನರಿಗೆ ಬೆಳಕಾಗುವ ನಿಟ್ಟಿನಲ್ಲಿ ನಾವು ಪಡೆದ ಜ್ಞಾನವನ್ನು ಮತ್ತೊಬ್ಬರಿಗೆ ಹಂಚುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು. ಬಡವರು ಅವಕಾಶ ಕೊರತೆಯಿಂದ ದೊಡ್ಡ ಹುದ್ದೆಗೆ ಹೋಗಲು ಸಾಧ್ಯವಾಗುವದಿಲ್ಲ. ಅಂತಹವರಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುವ ಸಾಮರ್ಥ್ಯವನ್ನು ಒದಗಿಸುವ ಸ್ಪರ್ಧಾ ಪರೀಕ್ಷೆ ಪುಸ್ತಕಗಳನ್ನು ಸ್ಪರ್ಧಾಳುಗಳಿಗೆ ಹಂಚುವ ಮೂಲಕ ಸಮಾಜಿಕ ಕಾರ್ಯಕರ್ತ ನಾಗಪ್ಪ ಮೇಟಿಯವರು ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದರು.

ನನ್ನಂತಹ ಅಧಿಕಾರಿಗಳು ದೇಶದಲ್ಲಿ ನೂರಾರು ಜನರಿದ್ದಾರೆ. ಯಾರಿಗೆ ಸಮಸ್ಯೆ ಇದೆ ಅಂಥವರ ಪರವಾಗಿ ಕೆಲಸ ಮಾಡುತ್ತಿದ್ದೇನೆ. ಪ್ರತಿಯೊಬ್ಬರು ನ್ಯಾಯ ಕೊಡಿಸುವ ಕೆಲಸವನ್ನು ಮಾಡಬೇಕು. ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ಪ್ರಾಮಾಣಿಕತೆಗೆ ಇನ್ನೊಂದು ಹೆಸರು ಲಾಲ್ ಬಹಾದ್ದೂರ ಶಾಸ್ತ್ರೀಯಾಗಿದ್ದಾರೆ ಅವರ ಜನ್ಮದಿನದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಉತ್ತಮ ಕಾರ್ಯವಾಗಿದೆ. ರಾಮಕೃಷ್ಣ ಪರಮಹಂಸರು, ಭಗತ್‌ಸಿಂಗ್, ಮಹಾತ್ಮಾಗಾಂಧೀಜಿಯವರ ಲಾಲ್ ಬಹದ್ದೂರ ಅವರ ಬದುಕಿನ ಬಗ್ಗೆ ಅಧ್ಯಯನ ಮಾಡಿ ಅವರ ಆದರ್ಶದಲ್ಲಿ ಬದುಕು ಸಾಗಿಸಬೇಕೆಂದರು. 120ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪುಸ್ತಕಗಳನ್ನು ವಿತರಿಸಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು, ಕಾಯಕಯೋಗಿಗಳು, ಮಾಜಿ ಸೈನಿಕರನ್ನು, ಆಶಾ ಕಾರ್ಯಕರ್ತೆಯರು, ಸಾಧಕರನ್ನು ಸನ್ಮಾನಿಸಲಾಯಿತು.

ಸರದಾರ ವಿ.ಗು.ದೇಸಾಯಿ ಪೌಂಡೇಶನ ಅಧ್ಯಕ್ಷ ನಾಗರಾಜ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿ ಅಶೋಕ ಮಿರ್ಜಿ, ಕೆಎಎಸ್ ಅಧಿಕಾರಿ ಎಸ್.ವೈ .ಮಾರಿಹಾಳ, ಅಶೋಕ ಮಾಲಬನ್ನವರ, ಯುವ ನಾಯಕ ನಾಗಪ್ಪ ಮೇಟಿ, ಸದೆಪ್ಪ ವಾರಿ, ಗ್ರಾ.ಪಂ ಅಧ್ಯಕ್ಷೆ ಗಂಗವ್ವ ಸಿಂಗಾರಿ, ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ ಗಡ್ಡಿ, ರಾವಸಾಹೇಬ ದೇಸಾಯಿ, ಗಂಗಪ್ಪ ವನ್ನೂರ, ಮಲ್ಲಿಕಾರ್ಜುನ ಗಾಣಗಿ, ಮಹಾಂತಯ್ಯ ಹಿರೇಮಠ, ಶ್ರೀಶೈಲ ಖನಗಾಂವಿ, ಶಿವಲಿಂಗಪ್ಪ ಮೇಟಿ, ನಿವೃತ್ತ ಶಿಕ್ಷಕ ಎಸ್.ಎನ್.ಪಾಟೀಲ, ಬಸವರಾಜ ಸಾವಳಗಿ, ಸಿದ್ದನಗೌಡ ಪಾಟೀಲ, ಬಸನಗೌಡ ಪಾಟೀಲ, ಬಿ.ಎಸ್.ವಾರಿ, ಮಹಾಂತೇಶ ಕಡಬಿ, ಬಸಪ್ಪ ಮುನವಳ್ಳಿ, ನಿಂಗಪ್ಪ ಗಿರಜಮ್ಮನವರ, ಶಂಕರ ಇಟಿ, ಇನ್ನಿತರರು ಪಾಲ್ಗೊಂಡಿದ್ದರು. ಬಾಳೇಶ ಸಿದ್ದಬಸನ್ನವರ ಸ್ವಾಗತಿಸಿದರು. ಚನಗೌಡ ಪಾಟೀಲ ನಿರೂಪಿಸಿ, ವಂದಿಸಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next