Advertisement
ಮದ್ದೂರು ಪಟ್ಟಣದ ಟಿಎಪಿಸಿಎಂಎಸ್ ಗೋದಾಮು ಬಳಿ ಜಮಾಯಿಸಿದ ಬೋರಾಪುರ ಗ್ರಾಮಸ್ಥರು ನ್ಯಾಯಬೆಲೆ ಅಂಗಡಿ ಮಾಲಿಕರ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಕಳೆದ ಹಲವಾರು ವರ್ಷಗಳಿಂದಲೂಅಕ್ರಮವೆಸಗಿರುವ ನ್ಯಾಯಬೆಲೆ ಅಂಗಡಿ ಪರವಾನಗಿಯನ್ನು ರದ್ದು ಗೊಳಿಸುವಂತೆ ಆಗ್ರಹಿಸಿದರು.
Related Articles
Advertisement
ಪರ್ಯಾಯ ವ್ಯವಸ್ಥೆ ಕಲ್ಪಿಸಿ: ಸ್ಥಳೀಯ ಗ್ರಾಮಸ್ಥರು ಸಚಿವರ ಆದೇಶ ತಿರಸ್ಕರಿಸಿ ಪಟ್ಟಣದ ಟಿಎಪಿಸಿಎಂಎಸ್ ಗೋದಾಮು ಬಳಿ ತಮ್ಮ ಪಡಿತರ ಪದಾರ್ಥಗಳನ್ನು ಪಡೆದರಲ್ಲದೇ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಹಲವಾರು ಅಕ್ರಮ, ಅವ್ಯವಹಾರಎಸಗಿರುವ ರಾಮಲಿಂಗಯ್ಯ ಅವರ ನ್ಯಾಯಬೆಲೆ ಅಂಗಡಿ ಪರವಾನಗಿಯನ್ನು ರದ್ದುಗೊಳಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದರು. ನಿವಾಸಿಗಳ ಹಿತ ಕಾಯಿರಿ: ಜಿಲ್ಲಾಡಳಿತ ಅಗತ್ಯ ಕ್ರಮವಹಿಸುವವರೆಗೆ ರಾಮಲಿಂಗಯ್ಯ ಅವರ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪದಾರ್ಥ ಪಡೆಯುವುದಿಲ್ಲವೆಂದು ಕೂಡಲೇ ಸಚಿವರು ತಮ್ಮ ಆದೇಶ ಹಿಂಪಡೆದು ಸ್ಥಳೀಯ ನಿವಾಸಿಗಳ ಹಿತ
ಕಾಯಬೇಕೆಂದರು. ಪ್ರತಿಭಟನೆ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಬೋರಾಪುರ ಶಂಕರೇಗೌಡ, ಮುಖಂಡರಾದ ಪ್ರಕಾಶ್, ಸೋಮಶೇಖರ್, ಪ್ರಸನ್ನ, ಸಿದ್ದರಾ ಮೇಗೌಡ, ಚಂದ್ರಶೇಖರ್, ನಾಗರಾಜು, ಬೋರೇ ಗೌಡ, ಹುಚ್ಚಯ್ಯ, ಶಿವರಾಮಯ್ಯ, ಮಲ್ಲೇಗೌಡ, ಮಾದೇಗೌಡ, ದಿನೇಶ್, ಹನುಮಂತು ನೇತೃತ್ವ ವಹಿಸಿದ್ದರು.