Advertisement

ದಿನ ಬಳಕೆಯ ವಸ್ತುಗಳ ಬೆಲೆ ದಿಢೀರ್‌ ಏರಿಕೆ

02:31 AM Feb 26, 2021 | Team Udayavani |

ಮಂಗಳೂರು/ಉಡುಪಿ: ಮಾರುಕಟ್ಟೆಯಲ್ಲಿ ದಿನ ಬಳಕೆಯ ವಸ್ತುಗಳ ಬೆಲೆ ದಿಢೀರನೆ ಏರಿಕೆಯಾಗಿದೆ. ಈರುಳ್ಳಿ, ಮೆಣಸು, ಖಾದ್ಯ ತೈಲದ ಜತೆಗೆ ಬೀನ್ಸ್‌, ಬೆಂಡೆ ಮತ್ತಿತರ ಕೆಲವು ತರಕಾರಿಗಳೂ ದುಬಾರಿಯಾಗಿವೆ.

Advertisement

ಈರುಳ್ಳಿ ಬೆಲೆ 15 ದಿನಗಳಲ್ಲಿ 8ರಿಂದ 10 ರೂ. ಹೆಚ್ಚಳವಾಗಿದೆ. ಬೀನ್ಸ್‌ ಮತ್ತು ಬೆಂಡೆ ತಲಾ 10 ರೂ. ತುಟ್ಟಿಯಾಗಿವೆ. ಕರಾವಳಿಯಲ್ಲಿ 2020 ಜೂನ್‌ ತಿಂಗಳಲ್ಲಿ ಇದ್ದ ಬೆಲೆಗಳಿಗೆ ಹೋಲಿಸಿದರೆ 7 ತಿಂಗಳಲ್ಲಿ ದೈನಂದಿನ ಬಳಕೆಯ ಆಹಾರ ವಸ್ತುಗಳ ಬೆಲೆ ಗಮನಾರ್ಹ ಏರಿಕೆಯಾಗಿದೆ.

ಕುಚ್ಚಲಕ್ಕಿ 3ರಿಂದ 4 ರೂ., ಬೆಳ್ತಿಗೆ ಅಕ್ಕಿ 2 ರೂ.; ಮೈದಾ 7 ರೂ., ತೊಗರಿ ಬೇಳೆ 14 ರೂ., ಉದ್ದ (ಬ್ಯಾಡಗಿ) ಮೆಣಸು 30-35 ರೂ., ಗಿಡ್ಡ ಮೆಣಸು 40 ರೂ., ತೆಂಗಿನೆಣ್ಣೆ 40 ರೂ., ಏಲಕ್ಕಿ 60 ರೂ., ಕಿತ್ತಳೆ 25 ರೂ. ಜಾಸ್ತಿಯಾಗಿದೆ.

ಪ್ರಸ್ತುತ ಉದ್ದ ಮೆಣಸು 300-320 ರೂ., ಗಿಡ್ಡ ಮೆಣಸು 280 ರೂ, ಉದ್ದು 128 ರೂ., ತೆಂಗಿನ ಎಣ್ಣೆ 206 ರೂ. ಸನ್‌ಫÉವರ್‌ ಎಣ್ಣೆ 136 ರೂ. ಎಳ್ಳೆಣ್ಣೆ 120 ರೂ. ಇದೆ.

ಈರುಳ್ಳಿ 50 ರೂ., ತೆಂಗಿನ ಕಾಯಿ 48- 50 ರೂ., ಸ್ಥಳೀಯ ಬೆಂಡೆ 80 ರೂ., ಸ್ಥಳೀಯ ಹೀರೆ 80 ರೂ., ಸ್ಥಳೀಯ ಮುಳ್ಳು ಸೌತೆ 60- 70 ರೂ., ಕ್ಯಾರೆಟ್‌ 40 ರೂ. ದ್ರಾಕ್ಷಿ ಸೀಡ್‌ಲೆಸ್‌ 80 ರೂ., ಕಪ್ಪು ಸೀಡ್‌ಲೆಸ್‌ 140 ರೂ., ಕಿತ್ತಳೆ 75 ರೂ, ಕದಳಿ ಬಾಳೆ ಹಣ್ಣು 60 ರೂ., ನೇಂದ್ರ ಬಾಳೆ ಹಣ್ಣು 50 ರೂ. ಇದೆ. ವಾರದ ಅವಧಿಯಲ್ಲಿ ಕಿತ್ತಳೆ 25 ರೂ. ಹಾಗೂ ನೇಂದ್ರ ಬಾಳೆ ಹಣ್ಣು 15 ರೂ. ಏರಿಕೆಯಾಗಿದೆ.

Advertisement

ತೆಂಗಿನ ಕಾಯಿ ಸಗಟು ಮಾರಾಟ ದರ 45 ರೂ. ಹಾಗೂ ರಿಟೇಲ್‌ ದರ 50 ರೂ. ಇದೆ. 1 ತಿಂಗಳಿಂದ ಇದೇ ದರ ಇದೆ.
ಈ ವರ್ಷ ಫಸಲು ಕಡಿಮೆ. ಹಾಗಾಗಿ ಸ್ಥಳೀಯ ತೆಂಗಿನಕಾಯಿ ಶೇ. 50 ರಷ್ಟು ಕಡಿಮೆಯಾಗಿದೆ. ಬಯಲು ಸೀಮೆಯ ತೆಂಗಿನ ಕಾಯಿ ಆವಕ ಕೂಡ ಕಡಿಮೆಯಾಗಿದೆ. ಕೊರೊನಾ ಕಾರಣ ದೇವಸ್ಥಾನಗಳಲ್ಲಿ ಊಟದ ವ್ಯವಸ್ಥೆ ಇಲ್ಲದ ಕಾರಣ ದೇಗುಲಗಳಿಗೆ ತೆಂಗಿನ ಕಾಯಿ ಪೂರೈಕೆ ಕಡಿಮೆ ಆಗಿದ್ದರೂ ಮಾರುಕಟ್ಟೆಯಲ್ಲಿ ತೆಂಗಿನ ಕಾಯಿ ಸರಬರಾಜು ಸಾಕಷ್ಟಿಲ್ಲ. ಅಲ್ಲದೆ ಬೊಂಡಕ್ಕೆ ಬೆಲೆ ಜಾಸ್ತಿ ಇರುವುದರಿಂದ ಹೆಚ್ಚಿನ ತೆಂಗು ಬೆಳೆಗಾರರು ಕಾಯಿ ಆಗಲು ಬಿಡದೆ ಬೊಂಡಗಳನ್ನು ಮಾರಾಟ ಮಾಡಲು ಹೊರಟಿದ್ದಾರೆ. ಹಾಗಾಗಿ ಕಾಯಿ ಬೆಲೆ ಏರಿಕೆ ಆಗಿರುವ ಸಾಧ್ಯತೆ ಇದೆ ಎಂದು ವ್ಯಾಪಾರಿ ಪ್ರವೀಣ್‌ ಉದಯವಾಣಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next