Advertisement

ಸಂಧಾನದ ಕಾರಣಕ್ಕೆ ಕೇಸ್‌ ರದ್ದು ಅಸಾಧ್ಯ: ಸುಪ್ರೀಂ

06:30 AM Oct 05, 2017 | Team Udayavani |

ನವದೆಹಲಿ: ಸಂತ್ರಸ್ತರು ಮತ್ತು ಸಂತ್ರಸ್ತರ ಕುಟುಂಬವು ಅತ್ಯಾಚಾರ ಅಥವಾ ಕೊಲೆ ಆರೋಪಿ ಜೊತೆಗೆ ಸಂಧಾನ ಮಾಡಿಕೊಂಡ ಮಾತ್ರಕ್ಕೆ ಮೊಕದ್ದಮೆಗಳನ್ನು ಮುಚ್ಚಿ ಹಾಕಲು ಆಗುವುದುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. 

Advertisement

ಅತ್ಯಾಚಾರ, ಕೊಲೆ, ದರೋಡೆಯಂಥ ಪ್ರಕರಣಗಳನ್ನು ಸಂಬಂಧಪಟ್ಟವರು ಸಂಧಾನ ಮಾಡಿಕೊಂಡು ಮುಗಿಸಿದರು ಎಂದು ನಾವು ಅದನ್ನು ಸಮಾಪ್ತಿಗೊಳಿಸಲಾಗದು. ಏಕೆಂದರೆ, ಅಂಥ ಪ್ರಕರಣಗಳು ಒಬ್ಬ ವ್ಯಕ್ತಿಗೆ ಸಂಬಂಧಿಸಿದ್ದು ಎನ್ನುವುದಕ್ಕಿಂತಲೂ ಒಂದು ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುವಂಥದ್ದು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next