Advertisement

ಹಾಲಿಗೆ ಬಂದ ಯುವತಿಯ ಮೇಲೆ ರೇಪ್‌: ಕಾಮುಕನ ಬಂಧನ

10:32 AM Jun 13, 2017 | Team Udayavani |

ಹೊನ್ನಾವರ: ಹಾಲು ತರಲು ಮನೆಗೆ ಬಂದ ಯುವತಿ ಮೇಲೆ ಬಲಾತ್ಕಾರವೆಸಗಿದ ಪ್ರಕರಣ ತಾಲೂಕಿನ ಕವಲಕ್ಕಿಯ ಪ್ಲಾಟ್‌ಕೇರಿಯಲ್ಲಿ ರವಿವಾರ ಸಂಜೆ ವೇಳೆ ನಡೆದಿದ್ದು ಈ ಕುರಿತು ಸೋಮವಾರ ಪೊಲೀಸರಿಗೆ ಬಲತ್ಕಾರಕ್ಕೊಳಗಾದ ಯುವತಿ ತಾಯಿ ದೂರು
ನೀಡಿದ್ದಾರೆ. 

Advertisement

ಪ್ರಕರಣಕ್ಕೆ ಸಂಬಂಧಿಸಿ  ಆರೋಪಿ ಕವಲಕ್ಕಿ ಪ್ಲಾಟ್‌ಕೇರಿಯ ಸುಬ್ರಹ್ಮಣ್ಯ(ಸುಬ್ಟಾ)
ಶೆಟ್ಟಿ (29)ಯನ್ನು ಪೊಲೀಸರು ಬಂಧಿಸಿದ್ದಾರೆ. 

21 ವರ್ಷದ ಮಗಳು ರವಿವಾರ ಸಂಜೆ ವೇಳೆ ಆರೋಪಿ ಮನೆಯಿಂದ ಹಾಲು ತರಲು ಹೋದ ವೇಳೆ ಆರೋಪಿಯು ತನ್ನ ಮಗಳನ್ನು ಬಲಾತ್ಕಾರ ಮಾಡಿರುವುದಾಗಿ ಆರೋಪಿಸಿ ಯುವತಿ ತಾಯಿ ದೂರಿನಲ್ಲಿ ಆಪಾದಿಸಿದ್ದು, ಈ ಕುರಿತು ಪಿಎಸ್‌ಐ ಆನಂದಮೂರ್ತಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿ ಸಿ ವಿಚಾರಣೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next