Advertisement

ಅತ್ಯಾಚಾರ ಯತ್ನ: ಅರ್ಚಕ,ಮೆಸ್ಕಾಂ ನೌಕರ ಬಂಧನ

03:45 AM Jul 04, 2017 | Team Udayavani |

ಕಡೂರು/ತರಿಕೆರೆ: ಪ್ರತ್ಯೇಕ ಪ್ರಕರಣದಲ್ಲಿ ಅತ್ಯಾಚಾರಕ್ಕೆಯತ್ನಿಸಿದ ಇಬ್ಬರು ಕಾಮುಕರನ್ನು ಪೊಲೀಸರು ಬಂಧಿಸಿರುವ ಘಟನೆ ಸೋಮವಾರ ವರದಿಯಾಗಿದೆ.

Advertisement

ಕಡೂರಲ್ಲಿ ತನ್ನದೇ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಮೆಸ್ಕಾಂ
ನೌಕರನೊಬ್ಬನಿಗೆ ಸಾರ್ವಜನಿಕರೇ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮೆಸ್ಕಾಂನಲ್ಲಿ ಕಿರಿಯ ಲೈನ್‌ಮನ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಸತೀಶ್‌ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ. ಪಟ್ಟಣದ ವೀರಭದ್ರೇಶ್ವರ ದೇವಾಲಯದ ಪಕ್ಕದ ಕಲ್ಲುಹೊಳೆ ರಸ್ತೆಯಲ್ಲಿರುವ ಮಹಿಳೆ ಮನೆಯಲ್ಲಿ ಮಧ್ಯಾಹ್ನ ಈ ಘಟನೆ ನಡೆದಿದೆ. ಮಹಿಳೆ ಕಿರುಚಾಡಿದ್ದರಿಂದ ಅಕ್ಕ-ಪಕ್ಕದ ನಿವಾಸಿಗಳು ಕೂಡಲೇ ಧಾವಿಸಿ ರಕ್ಷಿಸಿದ್ದಾರೆ. ಕರ್ತವ್ಯ ಮುಗಿಸಿ ಮಧ್ಯಾಹ್ನ ಊಟಕ್ಕೆ ಮನೆಗೆ ತೆರಳಿದ್ದಾಗ ಮಹಿಳೆಯನ್ನು ಹಿಂಬಾಲಿಸಿದ ಆರೋಪಿ ಕೃತ್ಯ ನಡೆಸಿದ್ದಾನೆ.ಈ ವೇಳೆ ಆರೋಪಿ ಸತೀಶ್‌ನನ್ನು ಸಾರ್ವಜನಿಕರು ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. 

ವಿಭೂತಿ ಹಚ್ಚಿ ಅತ್ಯಾಚಾರ ಯತ್ನ: ಗಂಡನಿಗೆ ಆರೋಗ್ಯ ಸರಿಯಿಲ್ಲವೆಂದು ಶಾಸ್ತ್ರ ಕೇಳಲು ಬಂದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಅರ್ಚಕನೋರ್ವ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಪಟ್ಟಣದ ಕಂಚಿನ ಬಾಗಿಲು ಆಂಜನೇಯಸ್ವಾಮಿ ದೇವಾಲಯದ ಅರ್ಚಕ ಮಂಜುನಾಥ ಭಟ್ಟ ಬಂಧಿತ. ಶಾಸ್ತ್ರ ಕೇಳಲು ಬಂದ ಮಹಿಳೆಯನ್ನು ತನ್ನ ಮನೆಗೆ ಕರೆದುಕೊಂಡು ಹೋದ ಮಂಜುನಾಥ್‌ ನಿಮ್ಮ ಕುಟುಂಬದ ಮೇಲೆ ಯಾರೋ ಮಾಟ ಮಂತ್ರ ಮಾಡಿಸಿದ್ದಾರೆಂದು ಮಹಿಳೆ ದೇಹಕ್ಕೆ ವಿಭೂತಿ ಹಚ್ಚಿದ್ದಾನೆ. ನಂತರ ಆಕೆ ಜ್ಞಾನ ತಪ್ಪಿ ಬಿದ್ದಿದ್ದು, ಈ ಸಮಯ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎನ್ನಲಾಗಿದೆ.

ಮಹಿಳೆ ದೂರಿನನ್ವಯ ತರೀಕೆರೆ ಪೊಲೀಸರು ಮಂಜುನಾಥ್‌ ಭಟ್ಟನನ್ನು ಬಂಧಿಸಿ ನ್ಯಾಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next