Advertisement

Ranji Trophy: ತಂಡಕ್ಕೆ ಮರಳಿದ ಅಗರ್ವಾಲ್‌-  ತಮಿಳುನಾಡು ವಿರುದ್ಧ ನಾಯಕತ್ವ

10:44 PM Feb 06, 2024 | Team Udayavani |

ಬೆಂಗಳೂರು: ಅನಾರೋಗ್ಯ ದಿಂದ ಸಂಪೂರ್ಣ ಚೇತರಿಸಿಕೊಂಡ ಮಾಯಾಂಕ್‌ ಅಗರ್ವಾಲ್‌ ಮರಳಿ ಕರ್ನಾಟಕ ರಣಜಿ ತಂಡವನ್ನು ಕೂಡಿಕೊಂಡಿದ್ದಾರೆ. ತಮಿಳುನಾಡು ವಿರುದ್ಧದ “ಸಿ” ವಿಭಾಗದ ಪಂದ್ಯದಲ್ಲಿ ಕರ್ನಾಟಕವನ್ನು ಮರಳಿ ಮುನ್ನಡೆಸಲಿದ್ದಾರೆ.

Advertisement

ತ್ರಿಪುರ ವಿರುದ್ಧದ ರಣಜಿ ಪಂದ್ಯ ಮುಗಿಸಿ ಸೂರತ್‌ಗೆ ವಿಮಾನದಲ್ಲಿ ಪ್ರಯಾಣಿಸುವಾಗ ಪಾನೀಯ ವೊಂದನ್ನು ಸೇವಿಸಿದ ಪರಿಣಾಮ ಅಗರ್ವಾಲ್‌ ತೀವ್ರ ಅಸ್ವಸ್ಥರಾಗಿದ್ದರು. ಅಗರ್ತಲಾ ಆಸ್ಪತ್ರೆಗೆ ದಾಖಲಾದ ಬಳಿಕ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಿದ್ದರು. ಇದರಿಂದ ರೈಲ್ವೇಸ್‌ ಎದುರಿನ ರಣಜಿ ಪಂದ್ಯದಲ್ಲಿ ಆಡಲು ಸಾಧ್ಯವಾಗಿರಲಿಲ್ಲ.

ಕರ್ನಾಟಕ ದ್ವಿತೀಯ
ಕರ್ನಾಟಕ – ತಮಿಳುನಾಡು ನಡು ವಿನ ರಣಜಿ ಪಂದ್ಯ ಫೆ. 9ರಂದು ಚೆನ್ನೈಯಲ್ಲಿ ಆರಂಭವಾಗಲಿದೆ. “ಸಿ’ ಗುಂಪಿನಲ್ಲಿ ಎರಡೂ ತಂಡಗಳು ತಲಾ 21 ಅಂಕ ಹೊಂದಿವೆ. ಆದರೆ ರನ್‌ರೇಟ್‌ ಲೆಕ್ಕಾಚಾರದಲ್ಲಿ ತಮಿಳುನಾಡು ಅಗ್ರಸ್ಥಾನಿಯಾಗಿದೆ (0.597). ಕರ್ನಾ ಟಕ 0.435 ರನ್‌ರೇಟ್‌ ಹೊಂದಿದೆ.

ಪಡಿಕ್ಕಲ್‌ ಕೂಡ ಲಭ್ಯ
ಮಾಯಾಂಕ್‌ ಅಗರ್ವಾಲ್‌ ಪುನರಾಗ ಮನದಿಂದ ಕರ್ನಾಟಕದ ಬ್ಯಾಟಿಂಗ್‌ ಸರದಿ ಬಲಿಷ್ಠಗೊಳ್ಳಲಿದೆ. ಜತೆಗೆ ಇನ್‌ಫಾರ್ಮ್ ಬ್ಯಾಟರ್‌ ದೇವದತ್ತ ಪಡಿಕ್ಕಲ್‌ ಕೂಡ ಲಭ್ಯರಾಗುವರು. ಇಷ್ಟು ದಿನ ಅವರು ಭಾರತ “ಎ’ ತಂಡದ ಪರ ಆಡುತ್ತಿದ್ದರು. ಇವರಿಬ್ಬರಿಗಾಗಿ ಡೇಗ ನಿಶ್ಚಲ್‌ ಮತ್ತು ಅಭಿಷೇಕ್‌ ಶೆಟ್ಟಿ ಅವರನ್ನು ಕೈಬಿಡಲಾಗಿದೆ.

ಕರ್ನಾಟಕ ತಂಡ: ಮಾಯಾಂಕ್‌ ಅಗರ್ವಾಲ್‌ (ನಾಯಕ), ನಿಕಿನ್‌ ಜೋಸ್‌ (ಉಪನಾಯಕ), ದೇವದತ್ತ ಪಡಿಕ್ಕಲ್‌, ಆರ್‌. ಸಮರ್ಥ್, ಮನೀಷ್‌ ಪಾಂಡೆ, ಶರತ್‌ ಶ್ರೀನಿವಾಸ್‌, ಅನೀಶ್‌ ಕೆ.ವಿ., ವೈಶಾಖ್‌ ವಿಜಯ್‌ಕುಮಾರ್‌, ವಾಸುಕಿ ಕೌಶಿಕ್‌, ಶಶಿಕುಮಾರ್‌ ಕೆ., ಸುಜಯ್‌ ಸಾತೇರಿ, ವಿದ್ವತ್‌ ಕಾವೇರಪ್ಪ, ವೆಂಕಟೇಶ್‌ ಎಂ., ಕಿಶನ್‌ ಎಸ್‌. ಬೆಡಾರೆ, ರೋಹಿತ್‌ ಕುಮಾರ್‌ ಎ.ಸಿ., ಹಾರ್ದಿಕ್‌ ರಾಜ್‌.

Advertisement

ಕೋಚ್‌: ಪಿ.ವಿ. ಶಶಿಕಾಂತ್‌

Advertisement

Udayavani is now on Telegram. Click here to join our channel and stay updated with the latest news.

Next