Advertisement

ಸಮಾಜದ ಸ್ವಾಸ್ಥ್ಯ  ಕಾಪಾಡುವುದು ಪ್ರತಿಯೊಬ್ಬರ ಹೊಣೆ

11:49 AM Jan 09, 2019 | |

ರಾಣಿಬೆನ್ನೂರ: ದೇಶದಲ್ಲಿಯ ಸರ್ವರ ಆರೋಗ್ಯ ಹಾಗೂ ಸಮಾಜದ ಸ್ವಾಸ್ಥ್ಯ ಕಾಪಾಡುವುದು ನಮ್ಮೆಲ್ಲರ ಹೊಣೆಯಾಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮತ್ತು ಸಂಘ ಸಂಸ್ಥೆಗಳು ಈ ದಿಶೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು 317ಬಿ ಜಿಲ್ಲಾ ಗವರ್ನರ್‌ ಮೋನಿಕಾ ಪ್ರಶಾಂತ ಸಾವಂತ ಹೇಳಿದರು.

Advertisement

ಮಾಗೋಡ ಗ್ರಾಮದ ಮಾರುತಿ ಕಲ್ಯಾಣ ಮಂಟಪದಲ್ಲಿ ಸೋಮವಾರ ನಗರದ ಲಯನ್ಸ್‌ ಸಿಟಿ ಕ್ಲಬ್‌ ಮತ್ತು ಶಂಕರ ಕಣ್ಣಿನ ಆಸ್ಪತ್ರೆ ಆಶ್ರಯದಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ದೇಶ ಪ್ರಗತಿ ಹೊಂದಬೇಕಾದರೆ ಪ್ರಜೆಗಳ ಆರೋಗ್ಯ ಬಹಳ ಮುಖ್ಯ ಎಂದರು.

ಎಲ್ಲ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಅತ್ಯವಶ್ಯಕ. ಈ ದಿಶೆಯಲ್ಲಿ ಲಯನ್ಸ್‌ ಸಿಟಿ ಕ್ಲಬ್‌ ಸಮಾಜಮುಖೀ ಕಾರ್ಯಕ್ರಮಗಳನ್ನು ಹಾಕಿಕೊಂಡು ತನ್ನ ಸೇವೆ ಸಲ್ಲಿಸುತ್ತಿರುವುದು ಸಂತಸದ ಸಂಗತಿ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಎಲ್ಲ ಅಂಗಗಳಂತೆ ಕಣ್ಣು ಬಹುಮುಖ್ಯ. ಅವುಗಳ ರಕ್ಷಣೆ ಮತ್ತು ಉಪಚಾರ ಮಾಡಿಕೊಳ್ಳುವುಲ್ಲಿ ಸದಾ ಜಾಗೃತವಾಗಿರಬೇಕು. ಅಂದಾಗ ಮಾತ್ರ ಬದುಕು ಉಜ್ವಲವಾಗಲು ಸಾಧ್ಯ ಎಂದರು. ಸಾನ್ನಿಧ್ಯ ವಹಿಸಿದ್ದ ಸ್ಥಳೀಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಪ್ರಕಾಶಾನಂದಜೀ ಮಹರಾಜ್‌ ಮಾತನಾಡಿ, ಎಲ್ಲ ಭಾವನೆಗಿಂತ ಸೇವಾ ಮನೋಭಾವನೆ ದೊಡ್ಡದು. ಬಡವರ, ದೀನದಲಿತರ, ಅನಾಥರ, ವೃದ್ಧರ ಆರೋಗ್ಯ ಕಾಪಾಡುವಲ್ಲಿ ಅನೇಕ ಸೇವಾ ಸಂಸ್ಥೆಗಳು ಕೆಲಸ ಮಾಡುತ್ತಿದ್ದು, ಅದರಲ್ಲಿ ಲಯನ್ಸ್‌ ಸಿಟಿ ಕ್ಲಬ್‌ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಸೇವೆ ಸಲ್ಲಿಸುತ್ತಿದೆ. ಈ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವ ಪದಾಧಿಕಾರಿಗಳು ಯಾವುದೇ ಫಲಾಪೇಕ್ಷೆ ಇಲ್ಲದೇ ನಿಷ್ಕಾಮ ಕರ್ಮಗಳಿಂದ ಸೇವೆ ಸಲ್ಲಿಸುವುದು ಇತರರಿಗೆ ಮಾದರಿಯಾಗಿದೆ ಎಂದು ಶ್ರೀಗಳು ಹೇಳಿದರು. ಇದೇ ಸಂದರ್ಭದಲ್ಲಿ ಶಂಕರ ಕಣ್ಣಿನ ಆಸ್ಪತ್ರೆಯ ವೈದ್ಯರು ಸುಮಾರು 326 ಜನರ ಕಣ್ಣಿನ ತಪಾಸಣೆ ನಡೆಸಿ ಅದರಲ್ಲಿ 65 ಜನರ ನೇತ್ರ ಶಸ್ತ್ರಚಿಕಿತ್ಸೆಗೆ ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆಗೆ ಕಳುಹಿಸಿಕೊಟ್ಟರು.

ಗ್ರಾಪಂ ಅಧ್ಯಕ್ಷ ಪ್ರಕಾಶ ಡಂಬರಮತ್ತೂರ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಆರೋಗ್ಯಾಧಿಕಾರಿ ಡಾ| ಸೋಮಶೇಖರ ಸಣ್ಣಮನಿ, ಡಾ| ರಾಘವೇಂದ್ರರಡ್ಡಿ ಕೆಂಚರಡ್ಡಿ, ಲಯನ್ಸ್‌ ಸಿಟಿ ಕ್ಲಬ್‌ ಅಧ್ಯಕ್ಷ ನಾಗರಾಜ ಮಾಕನೂರ, ಕಾರ್ಯದರ್ಶಿ ನಾಗರಾಜ ನಲವಾಗಲ, ಎ.ಎಂ.ನಾಯಕ, ನಿತ್ಯಾನಂದ ಕುಂದಾಪುರ, ಪ್ರೊ| ಬಿ.ಬಿ.ನಂದ್ಯಾಲ, ಸುರೇಶ ಕೆಂಚರಡ್ಡಿ, ಡಾ| ರಂಜನಾ ನಾಯಕ, ರುಕ್ಮಿಣಿದೇವಿ ಕಳಸದ, ವಿದ್ಯಾ ಮಾಕನೂರ, ಎನ್‌.ಎಸ್‌.ಪಾಟೀಲ, ಬಸವರಾಜ ಬಳ್ಳಾರಿ, ಶಂಕರ ಬಿಸಲಳ್ಳಿ ಸೇರದಂತೆ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next