Advertisement

ಸಂಕಷ್ಟಕ್ಕೆ ಸಿಲುಕಿದ ವ್ಯಾಪಾರಸ್ಥರಿಗೆ ನೆರವು

05:27 PM Apr 13, 2020 | Naveen |

ರಾಣಿಬೆನ್ನೂರ: ಹೊನ್ನತ್ತಿ ಗ್ರಾಮದಲ್ಲಿ ಮಾರ್ಚ್‌ ತಿಂಗಳಲ್ಲಿ ನಡೆದ ಶ್ರೀ ಹೊನ್ನಮ್ಮದೇವಿ ಜಾತ್ರಾ ಮಹೋತ್ಸವದಲ್ಲಿ ಅಂಗಡಿಗಳನ್ನು ಆರಂಭಿಸಿ ನಂತರ ತಮ್ಮ ಊರುಗಳಿಗೆ ತೆರಳಬೇಕಿದ್ದ ವ್ಯಾಪಾರಸ್ಥರು ಲಾಕ್‌ ಡೌನ್‌ ಪರಿಣಾಮ ಗ್ರಾಮದಲ್ಲಿಯೇ ಉಳಿಯುವಂತಾಗಿದ್ದು, ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ನೌಕರರು ಅಗತ್ಯ ಸಾಮಗ್ರಿಗಳ ಕಿಟ್‌ ವಿತರಿಸಿ ಮಾನವೀಯತೆ ಮೆರೆದರು.

Advertisement

ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರು ಸಂತ್ರಸ್ತರಿಗೆ ಕಿಟ್‌ ವಿತರಿಸಿ ಧೈರ್ಯ ತುಂಬಿದರು. ತಾಪಂ ಇಒ ಎಸ್‌.ಎಂ. ಕಾಂಬಳೆ, ಜಿಪಂ ಸದಸ್ಯ ಏಕನಾಥ ಬಾನುವಳ್ಳಿ, ಅಶೋಕ ನಾರಜ್ಜಿ, ಬಸವರಾಜ ಶಿಡೇನೂರ, ಸುರೇಶ ಕರೂರ, ಬಸಪ್ಪ ಪೂಜಾರ, ವೆಂಕಟೇಶ ಉಕ್ಕಡಗಾತ್ರಿ, ಗುಡ್ಡದ ಆನ್ವೇರಿ ಪಿಡಿಒ ವಿದ್ಯಾವತಿ ಹಳೇಗೌಡ್ರ, ಶಿಲ್ಪಾ ಪಾಟೀಲ, ಮಲ್ಲಿಕಾರ್ಜುನಪ್ಪ ಹುಬ್ಬಳ್ಳಿ, ಹೊನ್ನತ್ತಿ ಪಿಡಿಒ ಪಿ.ಎಸ್‌. ಆರಾಧ್ಯಮಠ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next