Advertisement

‘ರಣವ್ಯೂಹ’ದಲ್ಲಿ ಹೊಸಬರ ಪ್ರಯೋಗ!

04:39 PM Sep 03, 2022 | Team Udayavani |

ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ ಸಸ್ಪೆನ್ಸ್‌-ಥ್ರಿಲ್ಲರ್‌ ಕಥಾಹಂದರದ “ರಣವ್ಯೂಹ’ ಸಿನಿಮಾ ತೆರೆಗೆ ಬರಲು ತಯಾರಾಗಿದೆ. “ಶ್ರೀ ಶಿರಡಿ ಸಾಯಿ ಮೂವೀಸ್‌’ ಬ್ಯಾನರ್‌ನಲ್ಲಿ ವೇಣುಕುಮಾರ್‌ ಎಂ. ಜಿ ನಿರ್ಮಿಸಿರುವ “ರಣವ್ಯೂಹ’ ಸಿನಿಮಾಕ್ಕೆ ಎಸ್‌. ಎಸ್‌ ಶಂಕರನಾಗ್‌ ನಿರ್ದೇಶನ ಮಾಡಿದ್ದಾರೆ.

Advertisement

ಈಗಾಗಲೇ “ರಣವ್ಯೂಹ’ ಸಿನಿಮಾದ ಬಹುತೇಕ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಸಿನಿಮಾದ ಟ್ರೇಲರ್‌ ಮತ್ತು ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ.

ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ. ಹರೀಶ್‌ “ರಣವ್ಯೂಹ’ ಸಿನಿಮಾದ ಟ್ರೇಲರ್‌ ಮತ್ತು ಹಾಡುಗಳನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

“ರಣವ್ಯೂಹ’ ಸಿನಿಮಾದಲ್ಲಿ ಕಿರುತೆರೆಯ “ಮಜಾ ಭಾರತ’ ಖ್ಯಾತಿಯ ಅವಿನಾಶ್‌ ನಾಯಕನಾಗಿ ಮತ್ತು ಯಶಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸ್ಮಿತಾ, ಅವೀನ್‌, ಅಕ್ಷತ್‌, ವಿಸ್ಮಿತಾ ರಾಜ್‌, ರಾಜ್‌ ಮಂಜು, ಪ್ರೇಮ್‌ ಕನ್ನಡರಾಜು, ರಾಜ್‌ ಪ್ರತೀಕ್‌, ಯರ್ರಾಬಿರ್ರಿ ರಂಗರಾಜ್‌ ಮುಂತಾದವರು “ರಣವ್ಯೂಹ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ರಣವ್ಯೂಹ’ ಟ್ರೇಲರ್‌ ಮತ್ತು ಹಾಡುಗಳ ಬಿಡುಗಡೆ ಬಳಿಕ ಮಾತನಾಡಿದ ನಿರ್ದೇಶಕ ಎಸ್‌. ಎಸ್‌ ಶಂಕರನಾಗ್‌, “ಒಬ್ಬ ಮನುಷ್ಯನಿಗೆ ಆಂತರಿಕವಾಗಿ ಅವನದ್ದೇ ಆದ ಮೈಂಡ್‌ಸೆಟ್‌ ಇರುತ್ತದೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ಒಂದು ಅಸಲಿ ಮುಖವಿರುತ್ತದೆ. ಹೊರಗಿನಿಂದ ಯಾರನ್ನೂ ಒಳ್ಳೆಯವನು ಅಥವಾ ಕೆಟ್ಟವನು ಅಂತ ಹೇಳಲಾಗುವುದಿಲ್ಲ. ಇಂಥ ವ್ಯಕ್ತಿಗಳ ಕಥೆ ಈ ಸಿನಿಮಾದಲ್ಲಿದೆ. ಒಬ್ಬ ಮನುಷ್ಯನನ್ನು ಮೇಕಪ್‌ನಲ್ಲಿ ಹೇಗೆ ರೀ-ಕ್ರಿಯೇಟ್‌ ಮಾಡಬಹುದು. ಇಂತಹ ಹೊಸ ವಿಚಾರಗಳನ್ನು ಹೇಳಲಾಗಿದೆ. ಇದೆಲ್ಲವನ್ನೂ ಎಂಟರ್‌ಟೈನ್ಮೆಂಟ್‌ ಮೂಲಕ ಪ್ರೇಕ್ಷಕರಿಗೆ ಎಲ್ಲೂ ಬೋರ್‌ ಆಗದಂತೆ, ಕಮರ್ಷಿಯಲ್‌ ಆಗಿ ಸಿನಿಮಾದಲ್ಲಿ ತೋರಿಸಲಾಗಿದೆ’ ಎಂದರು.

“ರಣವ್ಯೂಹ’ ಸಿನಿಮಾದ ಮೂರು ಹಾಡುಗಳಿಗೆ ಆರೋನ್‌ ಕಾರ್ತಿಕ್‌ ವೆಂಕಟೇಶ್‌ ಸಂಗೀತ ಸಂಯೋ ಜಿಸಿದ್ದು, ರಾಜೇಶ್‌ ಕೃಷ್ಣನ್‌, ಇಂದೂ ನಾಗರಾಜ್‌ ಮೊದಲಾ ದವರು ಗೀತೆಗಳಿಗೆ ಧ್ವನಿಯಾಗಿದ್ದಾರೆ.

Advertisement

ಚಿತ್ರಕ್ಕೆ ಕೃಷ್ಣ ನಾಯ್ಕರ್‌ ಛಾಯಾಗ್ರಹಣ, ಪ್ರವೀಣ್‌ ರಾಜ್‌ ಸಂಕಲನ, ವಿನಯ್‌ ಕುಮಾರ್‌ ಕಥೆ ಇದೆ.  ಬೆಂಗಳೂರು, ಉಡುಪಿ, ಮಂಗಳೂರು ಮೊದಲಾದ ಕಡೆಗಳಲ್ಲಿ “ರಣವ್ಯೂಹ’ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next