Advertisement

Ranaji Trophy: ಕರ್ನಾಟಕ-ಕೇರಳ ಮೂರನೇ ದಿನದಾಟ ರದ್ದು

12:20 AM Oct 21, 2024 | Team Udayavani |

ಆಲೂರು: ಭಾರೀ ಮಳೆಯಿಂದಾಗಿ ಕರ್ನಾಟಕ-ಕೇರಳ ನಡುವಿನ ಎಲೈಟ್‌ ಗ್ರೂಪ್‌ ಸಿ ವಿಭಾಗದ 3ನೇ ದಿನದಾಟ ಸಂಪೂರ್ಣ ರದ್ದುಗೊಂಡಿದೆ. ಈ 3 ದಿನಗಳಲ್ಲಿ ನಡೆದದ್ದು 50 ಓವರ್‌ಗಳ ಆಟ ಮಾತ್ರ. ಕೇರಳ 3 ವಿಕೆಟ್‌ ನಷ್ಟಕ್ಕೆ 161 ರನ್‌ ಮಾಡಿದೆ.

Advertisement

ಮುಂಬಯಿಗೆ ಸಣ್ಣ ಗುರಿ
ಮುಂಬಯಿ: ಮಹಾರಾಷ್ಟ್ರ ಎದುರಿನ ಎಲೈಟ್‌ ಗ್ರೂಪ್‌ ಎ ರಣಜಿ ಪಂದ್ಯದಲ್ಲಿ ಮುಂಬಯಿ 74 ರನ್ನುಗಳ ಸುಲಭ ಗುರಿ ಪಡೆದಿದೆ. 3ನೇ ದಿನದಾಟದ ಅಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 13 ರನ್‌ ಮಾಡಿದ್ದು, ಗೆಲುವಿನತ್ತ ದಾಪುಗಾಲಿರಿಸಿದೆ.

315 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ಮಹಾರಾಷ್ಟ್ರ ತನ್ನ ದ್ವಿತೀಯ ಸರದಿಯಲ್ಲಿ 388 ರನ್‌ ಪೇರಿಸಲು ಯಶಸ್ವಿಯಾಯಿತು. ನಾಯಕ ಋತುರಾಜ್‌ ಗಾಯಕ್ವಾಡ್‌ 145, ಅಂಕಿತ್‌ ಭವೆ° 101, ಸಚಿನ್‌ ದಾಸ್‌ 98 ರನ್‌ ಬಾರಿಸಿ ಮಹಾರಾಷ್ಟ್ರ ಸರದಿಯನ್ನು ಬೆಳೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next