Advertisement

ಸ್ಯಾಂಡಲ್ವುಡ್ ನಲ್ಲಿ ಮತ್ತೊಂದು ‘ಟೈಟಲ್’ ವಿವಾದ: ಪಡ್ಡೆ ಹುಲಿ ಪಾಲಾದ ‘ರಾಣಾ’

01:04 PM Jul 03, 2021 | Team Udayavani |

ಬೆಂಗಳೂರು: ಸ್ಯಾಂಡಲ್ವುಡ್ ನಲ್ಲಿ ಮತ್ತೆ ಟೈಟಲ್ ವಿವಾದ ಶುರುವಾಗಿದೆ.  ರಾಕಿಂಗ್ ಸ್ಟಾರ್ ಯಶ್ ಅವರ ಚಿತ್ರಕ್ಕೆಂದು ಮೀಸಲಾಗಿದ್ದ ‘ರಾಣಾ’ ಶೀರ್ಷಿಕೆ ಇದೀಗ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಅವರ ಚಿತ್ರಕ್ಕೆ ಇಡಲಾಗಿದೆ.

Advertisement

ಹರ್ಷ ನಿರ್ದೇಶನದಲ್ಲಿ ‘ರಾಣಾ’ ಹೆಸರಿನಲ್ಲಿ ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಮಾಡುವುದಾಗಿ ಈ ಹಿಂದೆ ಘೋಷಣೆಯಾಗಿತ್ತು. ಆದರೆ ಇದೀಗ ಅದೇ ಹೆಸರಿನಲ್ಲಿ ಸಿನಿಮಾ ಸೆಟ್ಟೇರಿದೆ. ಈ ಚಿತ್ರಕ್ಕೆ ನಂದ ಕಿಶೋರ್ ನಿರ್ದೇಶ ಮಾಡಲಿದ್ದಾರೆ.

ನಂದ ಕಿಶೋರ್ ಸ್ಪಷ್ಟನೆ ಏನು ?

ಇನ್ನು ಇಂದು ರಾಣಾ ಚಿತ್ರದ ಮುಹೂರ್ತ ನೆರವೇರಿತು. ಈ ವೇಳೆ ಸಿನಿಮಾ ಹೆಸರಿನ ಬಗ್ಗೆ ಮಾತನಾಡಿರುವ ನಂದ ಕಿಶೋರ್, ”ರಾಣಾ’’ ಹೆಸರು ನಿರ್ಮಾಪಕ ಕೆ.ಮಂಜು ಅವರ ಬಳಿಯೇ ಇತ್ತು. ಸಿನಿಮಾದ ಕತೆ ಅಂತಿಮವಾದ ಮೇಲೆ ಸೂಕ್ತ ಹೆಸರಿಗಾಗಿ ಹುಡುಕುತ್ತಿದ್ದಾಗ ಕೆ.ಮಂಜು ಅವರ ನಿರ್ಮಾಣ ಸಂಸ್ಥೆಯ ಬಳಿ ಇರುವ ಹೆಸರುಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವುದು ಎಂದಾಯಿತು. ಆಗ ನಮಗೆ ಆಕರ್ಷಕವಾಗಿ ಕಂಡಿದ್ದು ‘ರಾಣಾ’ ಎಂದರು ನಂದ ಕಿಶೋರ್.

ನಾವು ಮಾಡುತ್ತಿರುವ ಆಕ್ಷನ್ ಥ್ರಿಲ್ಲರ್ ಕತೆಗೆ ‘ರಾಣಾ’ ಹೆಸರು ಚೆನ್ನಾಗಿ ಒಪ್ಪಿಗೆ ಆಗುತ್ತದೆ ಎಂಬ ಕಾರಣಕ್ಕೆ ನಾವು ಹೆಸರು ಆಯ್ಕೆ ಮಾಡಿದೆವೇ ಹೊರತು ಯಾರಿಗಾದರೂ ಬೇಸರ ಮಾಡಬೇಕು. ಅವರ ಬಳಿಯಿಂದ ಹೆಸರನ್ನು ಎತ್ತಿಕೊಂಡ ಬರಬೇಕು ಎಂಬ ಉದ್ದೇಶ ನಮಗೆ ಇರಲಿಲ್ಲ.

Advertisement

”ಹೊಸ ನಾಯಕರಿಗೆ ಬೇಕಾದಂತಹಾ ಪಬ್ಲಿಸಿಟಿ ‘ರಾಣಾ’ ಟೈಟಲ್‌ನಲ್ಲಿ ಇದೆ. ‘ರಾಣಾ’ ಹೆಸರು ಕೇಳಿದಾಗ ಆ ಹೆಸರು ನಮ್ಮ ನಾಯಕ ಶ್ರೇಯಸ್‌ಗೆ ಹಾಗೂ ಆತ ಮಾಡುತ್ತಿರುವ ಪಾತ್ರಕ್ಕೆ ಸೂಟ್ ಆಗುತ್ತದೆ ಎನಿಸಿತು ಹಾಗಾಗಿ ಸಿನಿಮಾಕ್ಕೆ ಅದೇ ಹೆಸರಿಟ್ಟಿದ್ದೇವೆ” ಎಂದಿದ್ದಾರೆ ನಂದ ಕಿಶೋರ್.

Advertisement

Udayavani is now on Telegram. Click here to join our channel and stay updated with the latest news.

Next