ಇಬ್ಬರೂ ಪರಸ್ಪರ ವಾಗ್ಧಾಳಿ ಮುಂದುವರಿಸಿದರು. ಸಂಡೂರಿನಲ್ಲಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಮುಲು, ರೆಡ್ಡಿ ಅವರಿಗೆ 371(ಜೆ) ಬಗ್ಗೆ ಗೊತ್ತಿಲ್ಲ, ಗೊತ್ತಿದ್ದರೆ ನನ್ನೊಂದಿಗೆ ಚರ್ಚೆಗೆ ಬರಲಿ. ಕೇವಲ ಅಕ್ರಮಗಳನ್ನೇ ಮಾಡಿರುವ ರೆಡ್ಡಿ ಹಾಗೂ ರಾಮುಲುಗೆ ಸೆಕ್ಷನ್ 420 ಬಗ್ಗೆ ಚೆನ್ನಾಗಿ ಗೊತ್ತಿದೆ ಎಂದು ವ್ಯಂಗ್ಯವಾಡಿದರು.
Advertisement
ರಿಪಬ್ಲಿಕ್ ಆಫ್ ಬಳ್ಳಾರಿ ಆಗಲು ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಕಾರಣ. ಅಕ್ರಮ ಗಣಿಗಾರಿಕೆಯ ತನಿಖೆ ನಡೆಸಿ ವರದಿ ನೀಡಿದ್ದ ಮಾಜಿ ಲೋಕಾಯುಕ್ತ ಸಂತೋಷ ಹೆಗ್ಡೆಯವರೇ ಈ ಬಗ್ಗೆ ಉಲ್ಲೇಖೀಸಿದ್ದರು. ಒಂದು ಕಾಲದಲ್ಲಿ ಇಡೀ ಜಿಲ್ಲೆಯನ್ನು ರೆಡ್ಡಿ ಟೀಂ ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡಿತ್ತು. ಮೊದಲು ಇಡೀ ಬಳ್ಳಾರಿಯಲ್ಲಿ ಭಯದ ವಾತಾವರಣ ಇತ್ತು. ರೆಡ್ಡಿ ಬ್ರದರ್ಸ್ ಎಲ್ಲ ಕಡೆ ಗೂಂಡಾಗಳನ್ನು ಬಿಟ್ಟಿದ್ದರು. ನಾನು ವಿರೋಧ ಪಕ್ಷದ ನಾಯಕನಾಗಿದ್ದಾಗ ಇಲ್ಲಿಗೆ ಬರದಂತೆ ನನಗೇ ಬೇಲಿ ಹಾಕಿ ರಸ್ತೆ ತಡೆದಿದ್ದರು. ಬಳ್ಳಾರಿಗೆ ಬಂದಾಗ ಜಾಗ ಕೂಡ ಸಿಗದಂತೆ ಮಾಡಿದ್ದರು. ಮಾಜಿ ಸಚಿವ ಜನಾರ್ದನ ರೆಡ್ಡಿ ನಿರ್ಮಿಸಿಕೊಂಡಿರುವ ಮನೆಯ ಬಳಿ ಎಷ್ಟು ಅಮಾಯಕರ ಮನೆಗಳು ಬಲಿಯಾಗಿವೆಯೋ? ರೆಡ್ಡಿ ಬ್ರದರ್ಸ್ ಹಾಗೂ ರಾಮುಲು ಇಡೀ ಜಿಲ್ಲೆಯಲ್ಲಿ ಸರ್ವಾಧಿಕಾರಿಗಳಂತೆವರ್ತಿಸುತ್ತಿದ್ದರು ಎಂದು ಜರಿದರು. ರಾಮುಲು ಸಂಸತ್ನಲ್ಲಿ ಒಮ್ಮೆಯೂ ಬಾಯಿ ಬಿಟ್ಟಿಲ್ಲ ಎಂದು ಹೇಳಿದ್ದೆ. ಆದರೆ, ನಾನು ಇಂತಿಷ್ಟು ಬಾರಿ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ. ಆದರೆ, ಅವರು ಎಲ್ಲಿ ಬಾಯಿ ಬಿಟ್ಟಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಪುನರುತ್ಛರಿಸಿದರು.
ಸಮುದಾಯಕ್ಕೆ ಕೊಟ್ಟ ಕೊಡುಗೆ ಏನು ಎಂಬುದನ್ನು ಹೇಳಲಿ. ಶಾಸಕರ ಭವನದ ಎದುರು ವಾಲ್ಮೀಕಿ ಪ್ರತಿಮೆಯನ್ನು ರಾಮುಲು ಸ್ಥಾಪನೆ ಮಾಡಿದ್ದಾರಾ? ಬರೀ ಜಾತಿ ಹೆಸರು ಹೇಳಿಕೊಂಡು ರಾಜಕೀಯ ಮಾಡೋದು ಬಿಡು ಮಿಸ್ಟರ್ ರಾಮುಲು ಎಂದು ಕಿಡಿಕಾರಿದರು. ಜನರಿಂದ ಕೇಳಿ ತಿಳಿದುಕೊಳ್ಳಿ: ಶ್ರೀರಾಮುಲು ಹಂಪಿ: 371(ಜೆ) ಬಗ್ಗೆ ರಾಮುಲು ಎಷ್ಟು ಹೋರಾಟ ಮಾಡಿದ್ದಾರೆ ಎಂಬುದನ್ನು ಸಿದ್ದರಾಮಯ್ಯನವರು ನನ್ನ ಬಳಿ ಕೇಳ್ಳೋದು ಬೇಕಿಲ್ಲ. ಜನರಿಗೆ ಗೊತ್ತಿದೆ. ಅವರಿಂದಲೇ ಕೇಳಿ ತಿಳಿದುಕೊಳ್ಳಲಿ ಎಂದು ಬಿಜೆಪಿ ಮುಖಂಡ ಶ್ರೀರಾಮುಲು ತಿರುಗೇಟು ನೀಡಿದರು. ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಅವರು, 371(ಜೆ) ಬಗ್ಗೆ ದಾಖಲಾತಿಗಳನ್ನು ತೆಗೆದು ನೋಡಿದರೆ ಎಷ್ಟು ಹೋರಾಟಗಳನ್ನು ಮಾಡಿದ್ದೇವೆ ಎಂಬುದು ಅವರಿಗೆ ತಿಳಿಯಲಿದೆ.
Related Articles
Advertisement