Advertisement

Ramnagar; ಆಟಿಕೆ ಫ್ಯಾಕ್ಟರಿಗೆ ಬೆಂಕಿ: ಗೋಡೆ ಒಡೆದು ಸಿಬಂದಿಯ ರಕ್ಷಣೆ

04:00 PM Feb 04, 2024 | Team Udayavani |

ರಾಮನಗರ : ಚನ್ನಪಟ್ಟಣದ ಕುಡಿ ನೀರು ಕಟ್ಟೆ ಬಳಿ ಆಟಿಕೆ ಫ್ಯಾಕ್ಟರಿಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಭಾನುವಾರ ನಡೆದಿದೆ.

Advertisement

ದಟ್ಟ ಹೊಗೆ ಕಾಣಿಸಿಕೊಂಡ ಕೂಡಲೇ ಗಮನಿಸಿದ ಪೊಲೀಸರು ಅಗ್ನಿ ಶಾಮಕ‌ ದಳಕ್ಕೆ ಕರೆ ಮಾಡಿದ್ದು, ತತ್ ಕ್ಷಣ ಕಾರ್ಯಾಚರಣೆ ಆರಂಭಿಸಲಾಗಿದೆ. ಕಾರ್ಮಿಕರು ಫ್ಯಾಕ್ಟರಿ ಮುಂಬಾಗಿಲಿ‌ನಲ್ಲಿ ಬರಲಾಗದ ಸ್ಥಿತಿಯಲ್ಲಿದ್ದ ವೇಳೆ ಜೆಸಿಬಿ ಯಿಂದ ಹಿಂದಿನ ಗೋಡೆ ಒಡೆದು ರಕ್ಷಣೆ ಮಾಡಲಾಗಿದೆ. ಚನ್ನಪಟ್ಟಣ ಟೌನ್ ಪೊಲೀಸರು ಸಕಾಲದಲ್ಲಿ ಕಾರ್ಯಾಚರಣೆಗೆ ನೆರವು ನೀಡಿದರು.

ಎರಡು ವಾಟರ್ ಜೆಟ್ ಲಾರಿಯ ಮೂಲಕ ಬೆಂಕಿ ನಂದಿಸುವ ಕಾರ್ಯ ನಡೆಸಲಾಗಿದ್ದು, ಸಿಲಿಂಡರ್ ಸ್ಫೋಟ ಗೊಳ್ಳುವ ಮುನ್ನವೇ ಸಿಬಂದಿಗಳನ್ನು ರಕ್ಷಣೆ ಮಾಡಲಾಗಿದೆ. ರವಿವಾರವಾದ ಕಾರಣ ಕಾರ್ಮಿಕರುಕಡಿಮೆ ಸಂಖ್ಯೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next