Advertisement

Ramnagar:ವ್ಹೀಲಿಂಗ್‌ ರೀಲ್ಸ್ ಮಾಡಿದ ಪುಂಡರಿಗೆ ಪೊಲೀಸರಿಂದಲೂ ರೀಲ್ಸ್ ಪಾಠ!

07:01 PM Aug 25, 2023 | Team Udayavani |

ರಾಮನಗರ : ವ್ಹೀಲಿಂಗ್‌ ಮಾಡಿ ರೀಲ್ಸ್ ಮಾಡಿ ರೂಲ್ಸ್ ಬ್ರೇಕ್ ಮಾಡಿದ ಪುಂಡರಿಗೆ ರೀಲ್ಸ್ ಮೂಲಕವೇ ಪೊಲೀಸರು ಎಚ್ಚರಿಕೆ ನೀಡಿದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

Advertisement

ಮಾಗಡಿ ಪೊಲೀಸರು ಕ್ರಮ ಕೈಗೊಂಡಿದ್ದು, ವ್ಹೀಲಿಂಗ್‌ ಮಾಡಿ ವ್ಹೀಲಿಂಗ್ ಮಾಡಿದ ಯುವಕನ ರಿಲ್ಸ್ ಗೆ ಯಶ್ ಚಿತ್ರದ ಡೈಲಾಗ್ ‘ಹುಲಿ ಬೇಟೆ ಹುಡುಕಿಕೊಂಡು ಹೋದ್ರೂ, ಬೇಟೆ ಹುಲಿ ಮುಂದೆ ಬಂದ್ರೂ,‌ಎದೆ ಬಗೆಯೋದು ಹುಲಿನೇ’ ಬಳಸಿಕೊಂಡಿದ್ದಾರೆ.

ವಿಡಿಯೋವನ್ನು ಸಾಮಾಜಿಕ‌ ಜಾಲತಾಣದಲ್ಲಿ ಮಾಗಡಿ ಪೊಲೀಸರು ಅಪ್ಲೋಡ್ ಮಾಡಿದ್ದು, ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಬೆಂಗಳೂರು -ಮೈಸೂರು ಹೆದ್ದಾರಿ ಮೇಲೆ ವ್ಹೀಲಿಂಗ್‌ ಮಾಡಿದ್ದ ಪೃಥ್ವಿ(21) ಎಂಬಾತನ ಮೇಲೆ ಮೋಟಾರ್ ವೆಹಿಕಲ್ ಅಡಿ ಪ್ರಕರಣ ದಾಖಲು ಮಾಡಿ ಬಂಧಿಸಿರುವ ಫೋಟೋ ಹಾಕಿರುವಪೊಲೀಸರು ಇತರರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next