Advertisement

Rameshwaram Cafe ಸ್ಫೋಟ: ಮಂಗಳೂರಿಗೆ ಪೊಲೀಸ್‌ ತಂಡ

11:37 AM Mar 05, 2024 | Team Udayavani |

ಮಂಗಳೂರು: ಬೆಂಗಳೂರಿನ ಕೆಫೆಯಲ್ಲಿ ಮಾ. 2ರಂದು ಸಂಭವಿಸಿದ ಬಾಂಬ್‌ ಸ್ಫೋಟ ಪ್ರಕರಣದ ತನಿಖೆಯ ಭಾಗವಾಗಿ ಬೆಂಗಳೂರು ಪೊಲೀಸರ ತಂಡವೊಂದು ಮಂಗಳೂರಿಗೆ ಆಗಮಿಸಿದೆ.

Advertisement

ಬೆಂಗಳೂರು ಸ್ಫೋಟಕ್ಕೂ ಮಂಗಳೂರಿನಲ್ಲಿ 2022ರಲ್ಲಿ ನಡೆದಿದ್ದ ಕುಕ್ಕರ್‌ ಬಾಂಬ್‌ ಸ್ಫೋಟಕ್ಕೂ ಸಾಮ್ಯತೆ ಕಂಡು ಬಂದ ಹಿನ್ನೆಲೆಯಲ್ಲಿ ಬೆಂಗಳೂರಿನ ಸಿಸಿಬಿ (ಅಪರಾಧ ಪತ್ತೆದಳ) ತಂಡ ಮಂಗಳೂರಿಗೆ ಆಗಮಿಸಿ ಪರಿಶೀಲನೆ ನಡೆಸಿದೆ.

ಇದಕ್ಕೂ ಮೊದಲು ಮಂಗಳೂರಿನ ಪೊಲೀಸ್‌ ತಂಡ ಬೆಂಗಳೂರಿಗೆ ತೆರಳಿ ಕೆಲವು ಮಾಹಿತಿಗಳನ್ನುನೀಡಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next