Advertisement

ಜನ ಛೀ ಥೂ ಎನ್ನುವ ಮೊದಲೇ ರಾಜಕೀಯ ನಿವೃತ್ತಿ: ಬಿಜೆಪಿ ಸಂಸದ ರಮೇಶ ಜಿಗಜಿಣಗಿ

10:34 AM Jan 05, 2020 | keerthan |

ವಿಜಯಪುರ: ಜನರಿಂದ ಛೀ ಥೂ ಎನಿಸಿಕೊಳ್ಳುವ ಮುನ್ನವೇ ಗೌರವದಿಂದಲೇ ರಾಜಕೀಯದಿಂದ ನಿವೃತ್ತಿ ಆಗುವೆ ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದರು.

Advertisement

ಶನಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಭವಿಷ್ಯದ ರಾಜಕೀಯ ನಡೆಯ ಕುರಿತು ಹೇಳಿಕೊಂಡ ಅವರು, ರಾಮಕೃಷ್ಣ ಹೆಗಡೆ ಅವರಂಥಹ ಸೈದ್ದಾಂತಿಕ ನಾಯಕರ ಗರಡಿಯಲ್ಲಿ ಬೆಳೆದವನು ನಾನು. ರಾಜಕೀಯಕ್ಕೆ ಗೌರವದಿಂದ ಬಂದಿದ್ದೇನೆ, ಗೌರವದಿಂದಲೇ ನಿರ್ಗಮಿಸುತ್ತೇನೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದು ಅನುಮಾನ ಎಂದರು.

ವಿಜಯಪುರ ವಿಮಾನ ನಿಲ್ದಾಣ ವಿಷಯವಾಗಿ ಎಲ್ಲಾ ಗೊಂದಲಗಳು ನಿವಾರಣೆಯಾಗಿದ್ದು, ಕಾಮಗಾರಿ ಚಾಲನೆ ನೀಡುವ ಕುರಿತು ಶೀಘ್ರವೇ ರಾಜ್ಯ ಸರ್ಕಾರದ  ಸಂಪುಟ ಸಭೆಯಲ್ಲಿ ತಾರ್ಕಿಕ ಅಂತ್ಯ ಸಿಗಲಿದೆ. ವಿಮಾನ ಹಾರಿಸಿಯೇ‌ ನಿವೃತ್ತಿಯಾಗುವ ವಿಚಾರ ಮಂಡಿಸುವೆ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next