Advertisement

Ramesh Jigajinagi: ಆಕಾಂಕ್ಷಿಯಲ್ಲ, ದೇವರು ಮಾತ್ರ ನನಗೆ ಟಿಕೆಟ್ ತಪ್ಪಿಸಬಲ್ಲ; ಜಿಗಜಿಣಗಿ

05:25 PM Mar 13, 2024 | Team Udayavani |

ವಿಜಯಪುರ: ನಾನು ಟಿಕೆಟ್ ಆಕಾಂಕ್ಷಿಯಲ್ಲ ನನಗೆ ಟಿಕೆಟ್ ಸಿಗುತ್ತದೆ. ನನ್ನ ಟಿಕೆಟ್ ತಪ್ಪಿಸಲು ದೇವರ ಹೊರತಾಗಿ ಬೇರೆ ಯಾರಿಂದಲೂ ಸಾಧ್ಯವಿಲ್ಲ. ಪ್ರಧಾನಿ ಮೋದಿಗೆ ದೈವಿಶಕ್ತಿ ಇದ್ದರೆ, ನನಗೆ ದೇವಿಶಕ್ತಿ ಇದೆ. ಸಮಯ ಹತ್ತಿರ ಬಂದಾಗ ನಿಮಗೆ ಗೊತ್ತಾಗಲಿದೆ ಎಂದು ಸಂಸದ ರಮೇಶ ಜಿಗಜಿಣಗಿ ವಿಜಯಪುರ ಕ್ಷೇತ್ರದಿಂದ ತಮಗೆ ಟಿಕೆಟ್ ಖಚಿತ ಎಂದು ಹೇಳಿಕೊಂಡಿದ್ದಾರೆ.

Advertisement

ಬುಧವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬೇಕಾದಷ್ಟು ಹಣವಿದ್ದವರು ಹಣ  ಕೊಡುತ್ತೇವೆಂದು ತಿರುಗಾಡಲಿ, ಅದು ಕೆಲಸಕ್ಕೆ ಬರಲ್ಲ, ಇದು ಗಟ್ಟಿ. ನನ್ನ ವಿರುದ್ಧ ಯಾರೂ ಏನೂ ಮಾಡಲಾಗಲ್ಲ. ನನಗೆ ಟಿಕೆಟ್ ಕೊಡುವ ಕುರಿತು ನನಗೂ ಹಾಗೂ ಜಿಲ್ಲಾಧ್ಯಕ್ಷರಿಗೆ ಎಲ್ಲಿಂದ ಮೆಸೇಜ್ ಬರಬೇಕೋ ಅಲ್ಲಿಂದ ಬಂದಿದೆ ಎನ್ನುವ ಮೂಲಕ ತಾವೇ ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿ ಎಂದರು.

ರಾಜಕೀಯವಾಗಿ ನನಗೆ ವಿರೋಧ ಮಾಡಲು ಬಂದವರು ಯಾರೂ ರಾಜಕೀಯವಾಗಿ ಉಳಿದಿಲ್ಲ ಎಂದು ಪುನರುಚ್ಚರಿಸಿದ ಜಿಗಜಿಣಗಿ, ನಾನು ಎಂದು ಆಕ್ರೋಶವಾಗಿ ಮಾತನಾಡಿಲ್ಲ, ನೀವು ಆಕ್ರೋಶವಾಗಿ ಮಾಡಿದರೆ ನಾನು ಹೀಗೆ ಮಾತನಾಡುವೆ ಎಂದು ಪತ್ರಕರ್ತರಿಗೆ ಪ್ರತಿಕ್ರಿಯಿಸಿದರು.

71 ವರ್ಷವಾದರೂ ನಾನು ಉಳಿದಿದ್ದೇನೆ, ಅವರು ಒಬ್ಬರಾದರೂ ಇದ್ದಾರಾ? ನನ್ನ ವಿರೋಧಿಸಿದವರಿಗೆ ಅದು ದೇವರು ಕೊಟ್ಟ ಶಿಕ್ಷೆ, ಯಾರು ಏನು ಮಾಡಲಾಗಲ್ಲ. ನಾನು ಇತಿಹಾಸ ನಿರ್ಮಾಣ ಮಾಡೇ ಮಾಡುತ್ತೇನೆ. ಆದರೆ ಅದನ್ನು ಹೇಳಲಾಗದು, ಈವರೆಗೆ ಇತಿಹಾಸ ನಿರ್ಮಿಸಿದ್ದೇನೆ ಎಂದರು.

ರಾಜ್ಯದಲ್ಲಿ ದಲಿತನಾಗಿ ಯಾರು ಮಾಡಲಾರದಂತ ಕೆಲಸ ಮಾಡಿದ್ದೇನೆ. ನೆರೆಯ ಚಿಕ್ಕೋಡಿ ಮೀಸಲು ಲೋಕಸಭೆ ಕ್ಷೇತ್ರದಿಂದ ಬೇರೆ ಬೇರೆ ಪಕ್ಷದಿಂದ ಮೂರು ಬಾರಿ ಗೆದ್ದಿರುವುದು ಇದು ಇತಿಹಾಸ ಅಲ್ಲವಾ. ಮುಂದಿನ ಯಾವುದೋ ಒಂದು ಸಂದರ್ಭದಲ್ಲಿ ರಾಜ್ಯದಲ್ಲಿ ಇತಿಹಾಸ ನಿರ್ಮಿಸಲಿದ್ದೇನೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next