Advertisement

ರಮೇಶ್‌ ಈಗ ಪತ್ತೇಧಾರಿ

09:50 AM Mar 26, 2019 | Lakshmi GovindaRaju |

ಕನ್ನಡದಲ್ಲಿ ಇತ್ತೀಚೆಗೆ ಸಸ್ಪೆನ್ಸ್‌-ಥ್ರಿಲ್ಲರ್‌ ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಿವೆ. ಹೀಗಾಗಿಯೇ ಏನೋ.., ಒಬ್ಬೊಬ್ಬರೇ ನಟರು ಪತ್ತೇಧಾರಿ ಪಾತ್ರಗಳಿಗೆ ಬಣ್ಣ ಹಚ್ಚುವುದರತ್ತಲೂ ಆಸಕ್ತರಾಗುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ “ಬೆಲ್‌ಬಾಟಂ’ ಚಿತ್ರದಲ್ಲಿ ನಟ ರಿಷಭ್‌ ಶೆಟ್ಟಿ ಡಿಟೆಕ್ವೀವ್‌ ದಿವಾಕರ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Advertisement

ಈಗ ಅಂಥದ್ದೇ ಪತ್ತೇಧಾರಿ ಪಾತ್ರಕ್ಕೆ ಬಣ್ಣ ಹಚ್ಚುವ ಸರದಿ ನಟ ಕಮ್‌ ನಿರ್ದೇಶಕ ರಮೇಶ್‌ ಅರವಿಂದ್‌ ಅವರದ್ದು. ಹೌದು, ಕನ್ನಡ ಚಿತ್ರರಂಗದಲ್ಲಿ ಕಳೆದ ಮೂರ್‍ನಾಲ್ಕು ದಶಕಗಳಿಂದ ಹಲವು ಪಾತ್ರಗಳಿಗೆ ಬಣ್ಣ ಹಚ್ಚಿ ಸೈ ಎನಿಸಿಕೊಂಡಿರುವ ರಮೇಶ್‌ ಅರವಿಂದ್‌, ಈಗ “ಶಿವಾಜಿ ಸುರತ್ಕಲ್’ ಎನ್ನುವ ಸಸ್ಪೆನ್ಸ್‌-ಥ್ರಿಲ್ಲರ್‌ ಚಿತ್ರದಲ್ಲಿ ಡಿಟೆಕ್ಟಿವ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಹಿಂದೆ “ಬದ್ಮಾಶ್‌’, “ಸುಳ್ಳೇ ಸತ್ಯ’ ಸಿನಿಮಾಗಳನ್ನ ನಿರ್ದೇಶಿಸಿದ್ದ ಆಕಾಶ್‌ ಶ್ರೀವತ್ಸ “ಶಿವಾಜಿ ಸುರತ್ಕಲ…’ ಚಿತ್ರ ನಿರ್ದೇಶಿಸುತ್ತಿದ್ದಾರೆ. ಪತ್ತೇದಾರಿ ಕಥೆಯಾಧಾರಿತ ಈ ಚಿತ್ರದ ಶೀರ್ಷಿಕೆಗೆ “ರಣಗಿರಿ ರಹಸ್ಯ’ ಎನ್ನುವ ಅಡಿಬರಹವೂ ಇದೆ. ಸದ್ಯ ಈ ಚಿತ್ರದ ಪೂರ್ವ ತಯಾರಿ ಕೆಲಸಗಳು ಶುರುವಾಗಿದ್ದು, ಈ ಚಿತ್ರದ ಫೋಟೋ ಶೂಟ್‌ ನಡೆಸಲಾಗಿದೆ.

ಇನ್ನು ಈ ಚಿತ್ರದಲ್ಲಿ ರಮೇಶ್‌ ಅರವಿಂದ್‌ ಅವರೊಂದಿಗೆ, ರಾಧಿಕಾ ಚೇತನ್‌, ಆರೋಹಿ ನಾರಾಯಣ್‌ ಸೇರಿದಂತೆ ಇತರರು ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರವನ್ನು ರೇಖಾ ಕೆ.ಎನ್‌ ಅನುಪ್‌ಗೌಡ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಇತ್ತೀಚೆಗೆ ನಟ ರಮೇಶ್‌ ಅರವಿಂದ್‌ ಡಿಟೆಕ್ಟಿವ್‌ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಫೋಟೋಗಳನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಶೇರ್‌ ಮಾಡಿಕೊಂಡಿದ್ದು,

-“ನಾನು ಶೆರ್ಲಾಕ್‌ ಹೋಮ್ಸ್ ಓದುತ್ತಾ ದೊಡ್ಡವನಾದೆ. ಕೊನೆಗೇ ಈಗ ನಾನೇ ಡಿಟೆಕ್ವಿವ್‌ ಪಾತ್ರವಾದೆ’ ಎಂದು ಬರೆದುಕೊಂಡಿದ್ದಾರೆ. ಒಟ್ಟಾರೆ ರಮೇಶ್‌ ಅವರ “ಶಿವಾಜಿ ಸುರತ್ಕಲ…’ ಫ‌ಸ್ಟ್‌ಲುಕ್‌ ನೋಡುಗರ ಗಮನ ಸೆಳೆದಿದೆ. ಇನ್ನು ಚಿತ್ರ ಹೇಗೆ ಮೂಡಿ ಬರಬಹುದು ಎಂಬ ಕುತೂಹಲದ ಪ್ರಶ್ನೆಗೆ ಚಿತ್ರ ಬರುವವರೆಗೆ ಕಾಯಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next