Advertisement

ರಮೇಶ್‌ದು ಕಾಂಗ್ರೆಸ್‌ ಡಿಎನ್‌ಎ: ದಿನೇಶ್‌

11:39 PM Apr 25, 2019 | Sriram |

ಬೆಂಗಳೂರು: ರಮೇಶ್‌ ಜಾರಕಿಹೊಳಿ ಅವರದ್ದು ಕಾಂಗ್ರೆಸ್‌ ಡಿಎನ್‌ಎ. ಅವರ ಮೈಯಲ್ಲಿ ಕಾಂಗ್ರೆಸ್‌ ರಕ್ತ ಹರಿಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌
ಪ್ರತಿಕ್ರಿಯಿಸಿದ್ದಾರೆ.

Advertisement

ಸುದ್ದಿಗಾರರ ಜೊತೆ ಮಾತನಾಡಿ, ರಮೇಶ್‌ ಜಾರಕಿಹೊಳಿಗೆ ಪಕ್ಷ ಯಾವುದೇ ರೀತಿಯ ನೋವು ಕೊಟ್ಟಿಲ್ಲ. ಪಕ್ಷ ಅವರನ್ನು ಉತ್ತಮವಾಗಿಯೇ ನಡೆಸಿಕೊಂಡಿದೆ. ಅವರು ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿರಬೇಕು. ಬಿಜೆಪಿಯವರ ಕುಮ್ಮಕ್ಕಿಗೆ ಒಳಗಾಗದೇ ಉತ್ತಮ ನಿರ್ಧಾರ ತೆಗೆದುಕೊಳ್ಳಬೇಕು. ಅವರ ತಲೆ ಕೆಡಿಸುವವರು ಬಹಳ ಜನ ಇದ್ದಾರೆ. ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದರು. ಕೆಲವು ವಿಚಾರದಲ್ಲಿ ಅವರಿಗೆ ನೋವಾಗಿರಬಹುದು. ಆದರೆ, ಪಕ್ಷ ಯಾವುದೇ ಅನ್ಯಾಯ
ಮಾಡಿಲ್ಲ. ಲೋಕಸಭೆ ಚುನಾವಣೆ ಫ‌ಲಿತಾಂಶದ ಬಳಿಕ ಎಲ್ಲದಕ್ಕೂ ತೆರೆ ಬೀಳಲಿದೆ. ಬಿಜೆಪಿಯ ಕುದುರೆ ವ್ಯಾಪಾರಕ್ಕೂ ಬ್ರೇಕ್‌ ಬೀಳಲಿದ್ದು, ನಂತರ ಶಾಂತ ರೀತಿಯ ವಾತಾವರಣ ನಿರ್ಮಾಣವಾಗಲಿದೆ ಎಂದು ಹೇಳಿದರು. ಇದೇ ವೇಳೆ,
ಮಾಜಿ ಶಾಸಕ ಉಮೇಶ್‌ ಜಾಧವ್‌ ವಿರುದ್ಧ ವಾಗ್ಧಾಳಿ ನಡೆಸಿದ ದಿನೇಶ್‌ , ಉಮೇಶ್‌ ಜಾಧವ್‌ ಚಿಂಚೋಳಿ ಕ್ಷೇತ್ರದ ಕಾರ್ಯಕರ್ತರು ಹಾಗೂ ಜನರಿಗೆ ದ್ರೋಹ ಬಗೆದಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಜಾಧವ್‌ ಸೋಲುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next