Advertisement

ಯಚೂರಿ ವಿರುದ್ಧ ಎಫ್ಐಆರ್‌ ದಾಖಲು ಮಾಡಿದ ಬಾಬಾ ರಾಮ್‌ದೇವ್‌

09:20 AM May 06, 2019 | Team Udayavani |

ಹರಿದ್ವಾರ: ರಾಮಾಯಣ ಮತ್ತು ಮಹಾ ಭಾರತ ಹಿಂಸಾಚಾರದ ನಿದರ್ಶನಗಳು ಎಂದಿದ್ದ ಸಿಪಿಂ ನಾಯಕ ಸಿತಾರಾಂ ಯಚೂರಿ ವಿರುದ್ಧ ಪತಂಜಲಿ ಯೋಗ ಪೀಠದ ಬಾಬಾ ರಾಮ್‌ದೇವ್‌ ಅವರು ಎಫ್ಐಆರ್‌ ದಾಖಲಿಸಿದ್ದಾರೆ.

Advertisement

ರಾಮ್‌ ದೇವ್‌ ಮತ್ತು ಇತರ ಕೆಲ ಸ್ವಾಮೀಜಿಗಳು ಯಚೂರಿ ವಿರುದ್ಧ ಹರಿದ್ವಾರ ಎಸ್‌ಎಸ್‌ಪಿ ಕಚೇರಿಯಲ್ಲಿ ಎಫ್ಐಆರ್‌ ದಾಖಲಿಸಿದ್ದಾರೆ.

ಯಚೂರಿ ಅವರು ನಮ್ಮ ಪೂರ್ವಜರನ್ನು ಅವಮಾನ ಮಾಡಿದ್ದಾರೆ. ಇದು ಅಪರಾಧ. ಅವರನ್ನು ಜೈಲಿಗಟ್ಟಬೇಕು ಮತ್ತು ಬಲವಾದ ತನಿಖೆನಡೆಸಬೇಕು ಎಂದು ರಾಮ್‌ದೇವ್‌ ಆಗ್ರಹಿಸಿದ್ದಾರೆ.

ಚುನಾವಾಣಾ ಪ್ರಚಾರ ಭಾಷಣದಲ್ಲಿ ಮಾತನಾಡುವ ವೇಳೆ ಯಚೂರಿ ಅವರು ಬಿಜೆಪಿ, ಆರ್‌ಎಸ್‌ಎಸ್‌ ವಿರುದ್ಧ ಕಿಡಿ ಕಾರಿ ರಾಮಾಯಣ ಮತ್ತು ಮಹಾಭಾರತ ಹಿಂದೂ ಹಿಂಸಾಚಾರದ ಮಾದರಿಗಳು ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next