Advertisement

ಕಾಳಿಂಗ ನಾವಡ ಪ್ರಶಸ್ತಿ ರಾಮಣ್ಣ ಆಯ್ಕೆ

11:49 AM Aug 03, 2018 | |

ಬೆಂಗಳೂರು: ಕಲಾಕದಂಬ ಆರ್ಟ್‌ ಸೆಂಟರ್‌ ವತಿಯಿಂದ ನೀಡಲಾಗುವ ಕಾಳಿಂಗ ನಾವಡ ಪ್ರಶಸ್ತಿಗೆ ಮಂದಾರ್ತಿಯ ಚಂಡೆ ವಾದಕ ರಾಮಣ್ಣ ಆಯ್ಕೆಯಾಗಿದ್ದಾರೆ. ಆ.12ರಂದು ಉದಯಭಾನು ಕಲಾಸಂಘದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

Advertisement

ಮಂದಾರ್ತಿ ಮೇಳದಲ್ಲಿ ಕೋಡಂಗಿ ವೇಷಧಾರಿಯಾಗಿ ಯಕ್ಷಗಾನ ಪ್ರವೇಶಿಸಿದ ರಾಮಣ್ಣ, ಚಂಡೆ ವಾದಕರಾಗಿ ಜನಪ್ರಿಯರು. ಮಾರಣಕಟ್ಟೆ, ಮಂದಾರ್ತಿ, ಸಾಲಿಗ್ರಾಮ ಹೀಗೆ 25ಕ್ಕೂ ಹೆಚ್ಚು ವರ್ಷಗಳ ಕಾಲ ಮೇಳ ತಿರುಗಾಟ ಮಾಡಿದ ಅನುಭವ ಅವರಿಗಿದೆ. ಸಾಲಿಗ್ರಾಮ ಮೇಳದಲ್ಲಿ ಕಾಳಿಂಗ ನಾವಡರ ಭಾಗವತಿಕೆ, ಶಂಕರ ಭಾಗವತ ಮದ್ದಳೆ, ರಾಮಣ್ಣ ಚಂಡೆಯ ಹಿಮ್ಮೇಳ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next