Advertisement

ರಾಮನಗರ ಘಟನೆ ಪಕ್ಷದ ವೈಫ‌ಲ್ಯ: ಶೆಟ್ಟರ್‌

06:30 AM Nov 04, 2018 | |

ಹುಬ್ಬಳ್ಳಿ: ರಾಮನಗರ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಿವೃತ್ತಿ ಘೋಷಿಸಿರುವುದು ಇಡೀ ಪಕ್ಷದ ವೈಫ‌ಲ್ಯವಾಗಿದ್ದು, ಯಾರೊಬ್ಬರನ್ನು ದೂರುವಂತಿಲ್ಲ. ಇದರಿಂದ ನಾವು ಪಾಠ ಕಲಿತಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಹೇಳಿದರು. 

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಇಂತಹ ಘಟನೆ ಎಂದೂ ನಡೆದಿರಲಿಲ್ಲ. ರಾಷ್ಟ್ರೀಯ ಪಕ್ಷವಾಗಿ ರಾಜ್ಯದಲ್ಲಿ ಇಂತಹ ಪರಿಸ್ಥಿತಿ ಎದುರಿಸಿರಲಿಲ್ಲ. ಇದು ವಿಶ್ವಾಸದ ಪ್ರಶ್ನೆಯಾಗಿದ್ದು, ಪಕ್ಷ ಒಬ್ಬರನ್ನು ನಂಬಿ ಟಿಕೆಟ್‌ ನೀಡಿರುತ್ತದೆ. ಕೊನೇ ಕ್ಷಣದಲ್ಲಿ ಕಣದಿಂದ ಹಿಂದೆ ಸರಿಯುವ ಮೂಲಕ ನಂಬಿಕೆ ದ್ರೋಹವಾಗಿದೆ. ನಂಬಿ ಕೆಟ್ಟಿದ್ದೇವೆ. ಇದೊಂದು ರಾಜಕೀಯ ಕುತಂತ್ರ. ಒಳಒಪ್ಪಂದ ಮಾಡಿಕೊಂಡು ಕಣದಿಂದ ಹಿಂದೆ ಸರಿದಿದ್ದಾರೆ. ಚುನಾವಣೆಗೆ ಸ್ಪರ್ಧಿಸಿದ ಮೇಲೆ ಗೆಲ್ಲಬೇಕೆಂಬ ಹುಮ್ಮಸ್ಸು ಇರಬೇಕು. ಆದರೆ, ಇದೀಗ ಇಲ್ಲಸಲ್ಲದ ಸಬೂಬು ಹೇಳುತ್ತಿದ್ದಾರೆ. 

ಕೇಂದ್ರ ಸಚಿವ ಸದಾನಂದ ಗೌಡ, ಸಿ.ಪಿ. ಯೋಗೀಶ್ವರ ಸೇರಿ ಹಲವು ನಾಯಕರು ಪ್ರಚಾರ ಮಾಡಿದ್ದಾರೆ. ಸಾವಿರಾರು ಬಿಜೆಪಿ ಕಾರ್ಯಕರ್ತರು ಹಗಲಿರುಳು ಪ್ರಚಾರ ಮಾಡುತ್ತಿದ್ದಾರೆ. ಮತ್ತೇನು ಸೌಲಭ್ಯಗಳು ಅವರಿಗೆ ಬೇಕಿದ್ದವು ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next