Advertisement

Ramanagara: ವಿದ್ಯುತ್ ಸ್ಪರ್ಶದಿಂದ ಕಾಡಾನೆ ಸಾವು; ಯಾರಿಗೂ ತಿಳಿಯದಂತೆ ಮಣ್ಣು!

11:24 PM Dec 06, 2023 | Team Udayavani |

ರಾಮನಗರ: ವಿದ್ಯುತ್ ಸ್ಪರ್ಶದಿಂದ ಕಾಡಾನೆ ಸಾವನ್ನಪ್ಪಿದ್ದು ಯಾರಿಗೂ ತಿಳಿಯದಂತೆ ರೈತನೊಬ್ಬ ಮಣ್ಣು ಮಾಡಿರುವ ಘಟನೆ ಕನಕಪುರ ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.

Advertisement

ಪಿಳ್ಳೇಗೌಡ ಎಂಬ ರೈತ ರಾಗಿ ಬೆಳೆ ರಕ್ಷಣೆಗೆಂದು ವಿದ್ಯುತ್ ತಂತಿ ಬಿಟ್ಟಿದ್ದ ಎನ್ನಲಾಗಿದೆ. 15 ವರ್ಷದ ಗಂಡು ಕಾಡಾನೆ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದೆ. ಕಳೆದ 4 ದಿನಗಳ ಹಿಂದೆ ಜಮೀನು ದಾಟುವಾಗ ವಿದ್ಯುತ್ ಸ್ಪರ್ಶದಿಂದ ಕಾಡಾನೆ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.

ಆನೆ ಸಾವನ್ನಪ್ಪಿದ ಬಳಿಕ ಯಾರಿಗೂ ತಿಳಿಯದಂತೆ ಜಮೀನಿನಲ್ಲೇ ಮಣ್ಣು ಮಾಡಲಾಗಿತ್ತು. ಸ್ಥಳೀಯರು ಕಾಡಾನೆಯನ್ನು ಮಣ್ಣು ಮಾಡಿದ್ದ ವಿಷಯವನ್ನು ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಅರಣ್ಯಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.

ಕಾಡಾನೆ ಮರಣೋತ್ತರ ಪರೀಕ್ಷೆ  ಮಾಡಿ, ದಂತ ಕಸಿದು ಮಣ್ಣು ಮಾಡಿದ ರೈತನ ಮೇಲೆ ಅರಣ್ಯಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next