Advertisement

ರಾಮನಗರ: ಬೆಳ್ಳಂಬೆಳಿಗ್ಗೆ ರೈತನ ಮೇಲೆ ಕಾಡಾನೆ ದಾಳಿ

12:46 PM Jun 16, 2023 | Team Udayavani |

ರಾಮನಗರ: ತಾಲೂಕಿನ ದೇವರದೊಡ್ಡಿ ಗ್ರಾಮದಲ್ಲಿ ಬೆಳ್ಳಂಬೆಳಿಗ್ಗೆ ರೈತನ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ ಶುಕ್ರವಾರ ನಡೆದಿದೆ.

Advertisement

ದೇವರದೊಡ್ಡಿ ನಿವಾಸಿ ರಾಜು ನಾಯಕ (60) ಕಾಡಾನೆ ದಾಳಿಗೆ ಸಿಲುಕಿದ ರೈತ. ಜಮೀನಿನ ಬಳಿ ತೆರಳಿದ್ದ ರೈತ ರಾಜುನಾಯಕ ಅವರ ಮೇಲೆ ಆನೆ ಏಕಾಏಕಿ ದಾಳಿ ನಡೆಸಿದೆ. ಗಾಯಗೊಂಡಿರುವ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ:World Test Championship Final ಪಂದ್ಯದಲ್ಲಿ ಸಿಗದ ಚಾನ್ಸ್: ಕೊನೆಗೂ ಮೌನ ಮುರಿದ ಅಶ್ವಿನ್

ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದು, ಗ್ರಾಮದ ಸಮೀಪವೇ ಬೀಡುಬಿಟ್ಟಿರುವ ಒಂಟಿ ಸಲಗವನ್ನು ಸೆರೆ ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next