Advertisement

Ramanagara ನಗರಸಭೆ ಅವ್ಯವಸ್ಥೆ: ರಸ್ತೆ ಧೂಳಿನಿಂದಾಗಿ ಡಿಕ್ಕಿಯಾದ ಕಾರುಗಳು

10:37 AM Feb 06, 2024 | Team Udayavani |

ರಾಮನಗರ: ರಸ್ತೆ ಧೂಳಿನಿಂದಾಗಿ ಕಾರುಗಳು ಡಿಕ್ಕಿಯಾಗಿ ಸಂಪೂರ್ಣ ಜಖಂ ಆದ ಘಟನೆ ರಾಮನಗರದ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದಿದೆ.

Advertisement

ನಗರಸಭೆಯು ರಸ್ತೆ ಡಿವೈಡರ್ ಮೇಲಿದ್ದ ಗಿಡ ಗಂಟೆಗಳನ್ನು ಜೆಸಿಬಿ ಮೂಲಕ ತೆರವು ಮಾಡಿಸುತ್ತಿತ್ತು. ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ನಗರಸಭೆ ಸಿಬ್ಬಂದಿಯು ತೆರವು ಮಾಡಿಸುತ್ತಿದ್ದರು. ಈ ವೇಳೆ ಧೂಳು ಹೆಚ್ಚಿದ್ದು ರಸ್ತೆ ಕಾಣದೆ ಮೂರು ಕಾರುಗಳು ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ‌ ಕಾರುಗಳು ಜಖಂಗೊಂಡಿದೆ.

ಮುಂಜಾಗ್ರತಾ ಕ್ರಮದ ಬಗ್ಗೆ ಪ್ರಶ್ನಿಸಿದ್ದಕ್ಕೆ‌ ನಗರಸಭೆ ಅಧಿಕಾರಿ ಉಢಾಫೆ ಉತ್ತರ ನೀಡಿದ್ದಾರೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next