Advertisement

Ramanagara: ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿ ಸಾವು

08:45 AM Oct 17, 2023 | Team Udayavani |

ರಾಮನಗರ: ಹೊಟ್ಟೆ ನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾಧೀನ ಖೈದಿಯೊಬ್ಬ ಮೃತಪಟ್ಟಿರುವ ಘಟನೆ ಆ.17 ರ ಮಂಗಳವಾರ ನಡೆದಿದೆ.

Advertisement

ಆಂಧ್ರ ಕುಪ್ಪಂ ಮೂಲದ ವಿಚಾರಣಾಧೀನ ಖೈದಿ ವೆಂಕಟೇಶ್ ಮೃತಪಟ್ಟವರು.

ಆನೆ ದಂತ ಕಳ್ಳತನ ಆರೋಪದ ಮೇಲೆ ಕನಕಪುರ ಅರಣ್ಯ ಇಲಾಖೆ ಅಧಿಕಾರಿಗಳು ಅ.11ರಂದು ಬಂಧಿಸಿದ್ದರು. ವಿಚಾರಣಾಧೀನ ಖೈದಿಯಾಗಿ ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿತ್ತು.

ಸೋಮವಾರ ಹೊಟ್ಟೆ ನೋವು ಎಂದು ಆಸ್ಪತ್ರೆ ಸೇರಿಸಲಾಗಿತ್ತು ಎನ್ನಲಾಗಿದ್ದು, ಮೃತಪಟ್ಟಿದ್ದಾರೆ. ಆದರೆ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next