Advertisement

Ramanagar; ರಾಜಕೀಯತಿರುವು ಪಡೆದ ಪೊಲೀಸ್-ವಕೀಲರ ತಿಕ್ಕಾಟ;DK ವಿರುದ್ದ ಎಚ್ಡಿಕೆ-ಅಶೋಕ್ ಆರೋಪ

09:04 AM Feb 20, 2024 | Team Udayavani |

ರಾಮನಗರ: ಸುಳ್ಳು ಎಫ್ಐಆರ್ ದಾಖಲು ಮಾಡಿರುವ ಪಿಎಸ್ಐ ಅಮಾನತ್ತು ಮಾಡುವಂತೆ ಆಗ್ರಹಿಸಿ ಪೊಲೀಸರ ವಿರುದ್ಧ ನಡೆಯುತ್ತಿದ್ದ ವಕೀಲರ ಪ್ರತಿಭಟನೆ ಇದೀಗ ರಾಜಕೀಯ ತಿರುವು ಪಡೆದಿದೆ. ಪೊಲೀಸರ ಹಠ-ವಕೀಲರ ಹೋರಾಟ ರಾಜಕೀಯವಾಗಿ ಆರೋಪ – ಪ್ರತ್ಯಾರೋಪಗಳ ದಾರಿ ಹಿಡಿದಿದೆ.

Advertisement

ವಕೀಲರ ತಂಡವು ಸೋಮವಾರ ಅಹೋರಾತ್ರಿ ಪ್ರತಿಭಟನೆ ನಡೆಸಿತ್ತು. ರಾಮನಗರ ಜಿಲ್ಲಾಧಿಕಾರಿಗಳ ಕಚೇರಿಯೆದುರು ಪ್ರತಿಭಟನೆ ನಡೆಸಿತ್ತು. ತಡರಾತ್ರಿ ಪ್ರತಿಭಟನಾ ಸ್ಥಳಕ್ಕೆ ಬಂದ ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ವಕೀಲರೊಂದಿಗೆ ಚರ್ಚಿಸಿದ್ದಾರೆ. ಇದೇ ವೇಳೆ ವಕೀಲರ‌ ಮೇಲಿನ ಸುಳ್ಳು ಪ್ರಕರಣ ಹಾಕಲು‌ ಡಿಕೆ‌ ಸಹೋದರರು ಒತ್ತಡ ಹಾಕಿದ್ದಾರೆ ಎಂದು‌ ಎಚ್ ಡಿಕೆ ಹಾಗೂ ಸಾಮ್ರಾಟ್ ನೇರ ಆರೋಪ ಮಾಡಿದ್ದಾರೆ.

ಅಲ್ಪಸಂಖ್ಯಾತರನ್ನ ಉಳಿಸಿಕೊಳ್ಳಲು ವಕೀಲರ ಮೇಲೆ ಎಫ್ ಐಆರ್ ದಾಖಲು ಮಾಡಿದ್ದಾರೆಂದು ಆರೋಪಿಸಲಾಗಿದೆ. ವಿಧಾನಸಭೆ ಕಲಾಪ ನಡೆಯುತ್ತಿರುವ ಕಾರಣ ಇಂದಿನ ಸೆಷನ್‌ನಲ್ಲಿ ವಕೀಲರ ಹೋರಾಟದ ವಿಚಾರದ ಬಗ್ಗೆ ಚರ್ಚೆ ನಡೆಸಲು ವಿಪಕ್ಷವು ಸಜ್ಜಾಗಿದೆ.

ಇಂದು ವಿಧಾನ‌ಸಭೆ ಕಲಾಪದಲ್ಲಿ ಡಿಕೆ ಬ್ರದರ್ಸ್ ವಿರುದ್ಧ ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಪ್ರತಿಭಟನೆ ನಡೆಸಲಿದ್ದಾರೆ. ನ್ಯಾಯ ಕೊಡಿಸುವುದಾಗಿ ವಕೀಲರಿಗೆ ಎಚ್ ಡಿಕೆ ಹಾಗೂ ಆರ್. ಅಶೋಕ್ ಭರವಸೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next