Advertisement

Ramanagara:ಒಕ್ಕಣೆಗೆ ಹಾಕಿದ್ದ ಹುಲ್ಲುಇಂಜಿನ್ ಗೆ ತಗುಲಿ ಕಾರು ಭಸ್ಮ

07:30 PM Jan 12, 2024 | Team Udayavani |

ರಾಮನಗರ: ರಸ್ತೆಯಲ್ಲಿ ಒಕ್ಕಣೆ ಮಾಡಲು ರಾಗಿ ಹುಲ್ಲು ಹಾಕಿದ್ದ ಪರಿಣಾಮ ಬೆಂಕಿ ಹತ್ತಿಕೊಂಡು ಕಾರು ಭಸ್ಮವಾದ ಘಟನೆ ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರ- ಅಂಕುಶನಹಳ್ಳಿ ರಸ್ತೆಯಲ್ಲಿ ನಡೆದಿದೆ.

Advertisement

ಕೃಷ್ಣಾಪುರ ಗ್ರಾಮದಿಂದ ಅಂಕುಶನಹಳ್ಳಿ ಕಡೆಗೆ ಹೋಗುತ್ತಿದ್ದ ಕಾರಿನ ಇಂಜಿನ್‌ಗೆ ಹುಲ್ಲು ಸಿಕ್ಕಿಕೊಂಡು ಬೆಂಕಿ ಹತ್ತಿಕೊಂಡಿದೆ.ತತ್ ಕ್ಷಣ ಕೆಳಗಿದ ಕಾರಿನ ಚಾಲಕ ಬೆಂಕಿನಂದಿಸಲು ಪ್ರಯತ್ನಿಸಿದನಾದರೂ ಕಾರು ಸಂಪೂರ್ಣ ಭಸ್ಮವಾಗಿದೆ.ಅಗ್ನಿಶಾಮಕ ದಳದ ತಂಡಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರು.

ರಸ್ತೆಯಲ್ಲಿ ರಾಗಿ, ಭತ್ತ ಹಾಗೂ ಹುರುಳಿಯನ್ನು ಒಕ್ಕಣೆ ಮಾಡುತ್ತಿರುವ ಕಾರಣ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ. ಈ ಹಿಂದೆ ಸಹ ರಸ್ತೆಯಲ್ಲಿ ಹುಲ್ಲು ಹಾಕಿದ್ದರಿಂದ ಹಲವು ಅಪಘಾತಗಳು ಸಂಭವಿಸಿವೆ.ಪೊಲೀಸ್ ಇಲಾಖೆ ರಸ್ತೆಯಲ್ಲಿ ಹುಲ್ಲು ಹಾಕುವುದನ್ನು ತಪ್ಪಿಸುವಂತೆ ವಾಹನ ಸವಾರರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next