Advertisement

ಸಂತ್ರಸ್ತರ ಸಮಸ್ಯೆ ಆಲಿಸಿದ ರಾಮಲಿಂಗಾರೆಡ್ಡಿ

10:27 AM Aug 25, 2019 | Suhan S |

ಕಲಾದಗಿ: ನೆರೆ ಪೀಡಿತ ಗ್ರಾಮಗಳಿಗೆ ಕಾಂಗ್ರೆಸ್‌ ಮುಖಂಡ ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿದರು.

Advertisement

ಸಂತ್ರಸ್ತರ ಸಮಸ್ಯೆ ಆಲಿಸಿದ ಅವರು, ಸರಕಾರದ ಮುಖ್ಯ ಕಾರ್ಯದರ್ಶಿ ಜೊತೆ ದೂರವಾಣಿ ಕರೆ ಮೂಲಕ ಮಾತನಾಡಿ ಇಲ್ಲಿನ ಸಂತ್ರಸ್ತರು ಅನುಭವಿಸುತ್ತಿದ್ದ ತೊಂದರೆಯನ್ನು ಹೇಳಿ ಶೀಘ್ರ ಸೂಕ್ತ ಕ್ರಮ ವಹಿಸಲು ಜಿಲ್ಲಾಧಿಕಾರಿಗಳಿಗೆ ಆದೇಶಿಸಲು ತಿಳಿಸಿದರು. ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ, ಈ ಬಗ್ಗೆ ಶೀಘ್ರ ಹಾಗೂ ಸೂಕ್ತ ಕ್ರಮ ವಹಿಸಲು ಹೇಳುವುದಾಗಿ ಸರಕಾರದ ಮುಖ್ಯ ಕಾರ್ಯದರ್ಶಿ ಹೇಳಿದ್ದಾರೆಂದು ಗ್ರಾಮದ ಪ್ರಮುಖ ನಾಯಕರಿಗೆ, ಗ್ರಾಮದ ಸಂತ್ರಸ್ತರಿಗೆ ತಿಳಿಸಲಾಯಿತು.

ಗ್ರಾಮದಲ್ಲಿ ನೆರೆ ಹಾವಳಿಗೆ ಸಂತ್ರಸ್ತರಾದವರಿಗೆ ದಿನ ಬಳಕೆ ವಸ್ತುಗಳ 300 ವಿಶೇಷ ಕಿಟಗಳ ಬಂಡಲ್ನ್ನು ನೀಡಿ ಸಂತ್ರಸ್ತ ಕುಟುಂಬಕ್ಕೆ ನೀಡಲು ಕಾಂಗ್ರೆಸ್‌ ಕಾರ್ಯರ್ತರಿಗೆ ಹೇಳಿದರು. ಗ್ರಾಮದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಶ್ರಯ ಪಡೆದ ಸಂತ್ರಸ್ತರ ಬಳಿಗೂ ಹೋಗಿ ಸಮಸ್ಯೆ ಆಲಿಸಿದರು.

ಮಾಜಿ ಶಾಸಕ ಜೆ.ಟಿ.ಪಾಟೀಲ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಂ.ಬಿ.ಸೌದಾಗರ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಂಗಣ್ನ ಮುಧೋಳ, ತಾಪಂ ಸದಸ್ಯ ಸಲೀಂ ಶೇಖ್‌, ಹಸನಮ್ಮದ್‌ ರೋಣ, ಫಕೀರಪ್ಪ ಮಾದರ, ಜೆ.ಡಿ.ಚೌದರಿ, ವೆಂಕಣ್ಣ ಬಿರಾದಾರ ಪಾಟೀಲ, ಅಮೀನಸಾಬ ಬೀಳಗಿ, ಶ್ರೀಕಾಂತ ಪಾಟೀಲ, ಮಲ್ಲಪ್ಪ ಜಮಖಂಡಿ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next