Advertisement

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

10:03 AM Apr 18, 2024 | Team Udayavani |

ತೆಕ್ಕಟ್ಟೆ: ಇಲ್ಲಿನ ಶ್ರೀರಾಮ ಭಜನಾ ತಂಡದ ಭಜನೋತ್ಸವ 2019, 4ನೇ ವರ್ಷದ ಕುಣಿತ ಭಜನೆ ಸ್ಪರ್ಧೆ ಹಾಗೂ 48ನೇ ವರ್ಷದ ಶ್ರೀ ರಾಮನವಮಿಯ ಮಂಗಲೋತ್ಸವ ಪ್ರಯುಕ್ತ ರಾವಣ ದಹನ ಹಾಗೂ ಓಕುಳಿ ಉತ್ಸವವು ಎ.18 ರಂದು ಸಂಪ್ರದಾಯದಂತೆ ನಡೆಯಿತು.

Advertisement

ಮಹಾರಾಜ ದಶರಥ ಸುತ ಶ್ರೀ ರಾಮ ಹುಟ್ಟಿದ ದಿನದಂದು ಆಚರಿಸುವ ಶ್ರೀ ರಾಮನವಮಿಯನ್ನು ಕಳೆದ 48 ವರ್ಷಗಳಿಂದಲೂ ತೆಕ್ಕಟ್ಟೆ ಶೇಷ ದೇವಾಡಿಗ ಅವರ ಮಾರ್ಗದರ್ಶನದಲ್ಲಿ ಆಚರಿಸಿಕೊಂಡು ಬಂದಿರುವ ಶ್ರೀರಾಮ ಭಜನಾ ತಂಡ ಪ್ರತಿ ವರ್ಷ ರಾಮ ನಾಮ ಸಂಕೀರ್ತನೆಯ ಮೂಲಕ ನಗರ ಭಜನೆ  ಹಾಗೂ ರಾಮನವಮಿಯ ಪ್ರಯುಕ್ತ ಅಹೋರಾತ್ರಿ ಭಜನಾ ಕಾರ್ಯಕ್ರಮವನ್ನು ಆಚರಿಸಿಕೊಂಡು ಬಂದಿದ್ದು ತಾಲೂಕಿನಲ್ಲಿ ಒಂದು ಉತ್ತಮ ಭಜನಾ ಸಂಘವಾಗಿ ರೂಪುಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next