Advertisement

ರಾಮ ಮಂದಿರಕ್ಕಾಗಿ ನ.25ಕ್ಕೆ ಬೆಂಗಳೂರಲ್ಲಿ ರ್ಯಾಲಿ: ವಿಎಚ್‌ಪಿ

06:00 AM Nov 11, 2018 | |

ಹೊಸದಿಲ್ಲಿ: ರಾಮ ಮಂದಿರ ನಿರ್ಮಾಣಕ್ಕಾಗಿ ಪ್ರತ್ಯೇಕ ಕಾನೂನನ್ನು ಜಾರಿಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಲು ನ.25ರಂದು ಬೆಂಗಳೂರಿನಲ್ಲಿ ಬೃಹತ್‌ ರ್ಯಾಲಿ ನಡೆಸಲಾಗುತ್ತದೆ. ಅದೇ ದಿನ ಅಯೋಧ್ಯೆ, ನಾಗ್ಪುರಗಳಲ್ಲಿಯೂ ಅದೇ ಮಾದರಿ ಕಾರ್ಯಕ್ರಮ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್‌ನ ಕಾರ್ಯಕಾರಿ ಅಧ್ಯಕ್ಷ ಅಲೋಕ್‌ ಕುಮಾರ್‌ ಶನಿವಾರ ನವದೆಹಲಿಯಲ್ಲಿ ತಿಳಿಸಿದ್ದಾರೆ. ಇದಾದ ಬಳಿಕ ಡಿ.9ರಂದು ರಾಮಲೀಲಾ ಮೈದಾನದಲ್ಲಿ ಮತ್ತೂಂದು  ರ್ಯಾಲಿ ಏರ್ಪಡಿ ಸಲಾಗಿದೆ. ಇವುಗಳ ವರದಿಯನ್ನು ಜ. 31ರಂದು ಅಲಹಾಬಾದ್‌ನಲ್ಲಿ  ನಡೆಯಲಿರುವ ಧರ್ಮ ಸಂಸದ್‌ನಲ್ಲಿ ಮಂಡಿಸಲಾಗುತ್ತದೆ ಎಂದು ಅಲೋಕ್‌ ತಿಳಿಸಿದ್ದಾರೆ. ಈ ಬಗ್ಗೆ ಇತ್ತೀಚೆಗೆ ನವದೆಹಲಿಯಲ್ಲಿ ನಡೆದಿದ್ದ ಸಂತರ ಸಭೆಯಲ್ಲಿ ನಿರ್ಧರಿಸಲಾಗಿತ್ತು ಎಂದು ಹೇಳಿದ್ದಾರೆ ಅಲೋಕ್‌. ದೇಶದ ವಿವಿಧ ಭಾಗಗಳಲ್ಲಿ ನಡೆಯುವ ಈ ಸಾರ್ವಜನಿಕ ಕಾರ್ಯಕ್ರಮ ಮಂದಿರ ನಿರ್ಮಾಣ ನಿಟ್ಟಿನಲ್ಲಿ ಕೇಂದ್ರದ ಮೇಲೆ ಒತ್ತಡ ಹೇರಲು ನೆರವಾಗಲಿದೆ ಎಂದಿದ್ದಾರೆ.

Advertisement

ಕಾಂಗ್ರೆಸ್‌ ಅಡ್ಡಿ: ಇದೇ ವೇಳೆ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್‌ ಬಲು ದೊಡ್ಡ ಅಡ್ಡಿ ಎಂದು ಉತ್ತರ ಪ್ರದೇಶ ಸಚಿವ ಶ್ರೀಕಾಂತ್‌ ಶರ್ಮಾ ಟೀಕಿಸಿದ್ದಾರೆ. ಮತಗಳನ್ನು ಪಡೆಯುವ ಒಂದೇ ಉದ್ದೇಶಕ್ಕಾಗಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆ. ಮಂದಿರ ನಿರ್ಮಾಣದ ಬಗ್ಗೆ ಅವರು ತಮ್ಮ ಪಕ್ಷದ ನಿಲುವಿನಲ್ಲಿ ಸ್ಪಷ್ಟನೆ ನೀಡಲಿ ಎಂದು ಒತ್ತಾಯಿಸಿದ್ದಾರೆ. ಮಥುರಾದಲ್ಲಿ ಮಾತನಾಡಿದ ಅವರು, ಕಾಂಗ್ರೆಸಿಗರು ರಾಮ ದೇಗುಲ, ರಾಮ ಸೇತುವನ್ನು ವಿರೋಧಿಸುತ್ತಿದ್ದಾರೆ. ಅವರು ಗೋಹತ್ಯೆಯಲ್ಲಿಯೂ ನಿರತರಾಗಿದ್ದಾರೆ ಎಂದು ದೂರಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next