Advertisement

ಆರೆಸ್ಸೆಸ್‌ ಕಾರ್ಯಕರ್ತರಿಂದ ರಾಖೀ ಕಟ್ಟಿಸಿಕೊಂಡದ್ದಕ್ಕೆ ವರ್ಗ

07:35 AM Aug 29, 2017 | Team Udayavani |

ತಿರುವನಂತಪುರಂ: ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಕಾರ್ಯಕರ್ತರಿಂದ ಪೊಲೀಸ್‌ ಠಾಣೆಯೊಳಗೆ ರಾಖೀ ಕಟ್ಟಿಸಿಕೊಂಡ ಕಾರಣಕ್ಕೆ ಇಲ್ಲಿಯ ನವುವಮೂಡು ಪೊಲೀಸ್‌ ಠಾಣೆಯ ಪೊಲೀಸರು ಶಿಕ್ಷೆಗೆ ಗುರಿಯಾಗಿದ್ದಾರೆ. 

Advertisement

ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಸೇರಿ ನಾಲ್ವರು ಪೊಲೀಸರನ್ನು ಪೊಲೀಸ್‌ ತರಬೇತಿ ಶಿಬಿರಕ್ಕೆ ವರ್ಗಾಯಿಸಲಾಗಿದೆ. ಪೊಲೀಸ್‌ ಠಾಣೆಯ ಕರ್ತವ್ಯದ ಅವಧಿಯಲ್ಲಿ ರಾಜಕೀಯ ಪಕ್ಷಗಳಿಗೆ ಸೇರಿದ ಕಾರ್ಯಕರ್ತರಿಂದ ಠಾಣೆಯೊಳಗೆ ರಾಖೀ ಕಟ್ಟಿಸಿಕೊಂಡಿದ್ದು ಕರ್ತವ್ಯಲೋಪವಾಗಿದೆ. ಇದರಿಂದ ಈ ಸಿಬಂದಿಗೆ ಇನ್ನಷ್ಟು ತರಬೇತಿಯ ಅಗತ್ಯವಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಆದ್ದರಿಂದ ಅವರನ್ನು ತರಬೇತಿ ಶಿಬಿರಕ್ಕೆ ವರ್ಗಾಯಿಸಲಾಗಿದೆ ಎಂದು ಉನ್ನತ ಮಟ್ಟದ ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next