Advertisement

ಜೀವನ್ಮರಣ ಹೋರಾಟದಲ್ಲಿರುವ ಅಮರ್ ಸಿಂಗ್ ಬಿಗ್ ಬಿ ಕ್ಷಮೆ ಕೇಳಿದ್ಯಾಕೆ?

04:30 PM Apr 08, 2020 | Hari Prasad |

ನವದೆಹಲಿ: ರಾಜ್ಯಸಭಾ ಸಂಸದ ಅಮರ್ ಸಿಂಗ್ ಅವರು ಅಮಿತಾಬ್ ಬಚ್ಚನ್ ಮತ್ತು ಅವರ ಕುಟುಂಬ ಸದಸ್ಯರಲ್ಲಿ ಕ್ಷಮೆ ಯಾಚಿಸುತ್ತಿರುವ ವಿಡಿಯೋ ಒಂದನ್ನು ಫೇಸ್ಬುಕ್ ನಲ್ಲಿ ಅಪ್ಲೋಡ್ ಮಾಡಿರುವುದು ಇದೀ ಗ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

Advertisement

ತನಗಿರುವ ಗಂಭೀರ ಆರೋಗ್ಯ ಸಮಸ್ಯೆಗಾಗಿ ಸಿಂಗಾಪುರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಮರ್ ಸಿಂಗ್ ಅವರು ತಾವಿರುವ ಆಸ್ಪತ್ರೆಯ ಕೋಣೆಯಿಂದಲೇ ಈ ವಿಡಿಯೋವನ್ನು ಮಾಡಿ ತಮ್ಮ ಫೇಸ್ಬುಕ್ ಪುಟದಲ್ಲಿ ಅಪ್ಲೋಡ್ ಮಾಡಿದ್ದಾರೆ.ಅಮರ್ ಸಿಂಗ್ ಅವರ ತಂದೆಯವರ ಪುಣ್ಯತಿಥಿ ಸಂದರ್ಭವನ್ನು ನೆನಪಿಸಿಕೊಂಡು ಟ್ವೀಟ್ ಮಾಡಿರುವ ಅಮಿತಾಬ್ ಬಚ್ಚನ್ ಅವರ ಈ ಟ್ವೀಟ್ ಗೆ ಪ್ರತಿಯಾಗಿ ಅಮರ್ ಸಿಂಗ್ ಅವರು ಈ ‘ಪಶ್ಚಾತ್ತಾಪದ’ ವಿಡಿಯೋ ಮಾಡಿದ್ದಾರೆ.

‘ಅಮಿತಾಬ್ ಅವರು ನನಗಿಂತಲೂ ಹಿರಿಯರು, ಅವರ ಕುಟುಂಬದ ಕುರಿತಾಗಿ ನಾನು ಈ ಹಿಂದೆ ಉಪಯೋಗಿಸಿರುವ ಕಟು ಶಬ್ದಗಳಿಗೆ ನಾನು ಪಶ್ಚಾತ್ತಾಪ ಪಡುತ್ತೇನೆ. ನನಗೆ ಅವರ ಬಗ್ಗೆ ದ್ವೇಷಕ್ಕಿಂತಲೂ ಹೆಚ್ಚಾಗಿ ಅವರ ವರ್ತನೆಯ ಕುರಿತಾಗಿ ನಿರಾಶೆಯ ಭಾವ ಆವರಿಸಿತ್ತು. ಆದರೆ ಅವರಿಗೆ ನನ್ನ ಕುರಿತಾಗಿ ಬೇಸರವಾಗಲೀ, ಕಹಿಯಾಗಲೀ ಅವರಲ್ಲಿ ಇರಲೇ ಇಲ್ಲ’ ಎಂದು ಅಮರ್ ಸಿಂಗ್ ಅವರು ಈ ವಿಡಿಯೋದಲ್ಲಿ ಮಾತನಾಡುತ್ತಾ ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next