Advertisement

ಈ ಬಾರಿ ನಾನು ಹೋಳಿ ಹಬ್ಬ ಆಚರಣೆ ಮಾಡುವುದಿಲ್ಲ : ರಾಜನಾಥ್‌ ಸಿಂಗ್‌ 

01:32 PM Mar 19, 2019 | |

ಹೊಸದಿಲ್ಲಿ : ಪುಲ್ವಾಮಾದಲ್ಲಿ  ಸಿಆರ್‌ಪಿಎಫ್ ಯೋಧರ ಮೇಲೆ ಭೀಕರ ಉಗ್ರದಾಳಿ ನಡೆದ ಹಿನ್ನಲೆಯಲ್ಲಿ  ಈ ಬಾರಿ ಹೋಳಿ ಹಬ್ಬವನ್ನು ಆಚರಣೆ ಮಾಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ಹೇಳಿದ್ದಾರೆ.

Advertisement

ಈ ಬಾರಿ ಹೋಳಿ ಸಂಭ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಮಂಗಳವಾರ ರಾಜ್‌ನಾಥ್‌ ಸಿಂಗ್‌ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ. 

2017ರಲ್ಲೂ ರಾಜ್‌ನಾಥ್‌ ಸಿಂಗ್‌ ಅವರು ಸುಕ್ಮಾ ದಲ್ಲಿ 12 ಸಿಆರ್‌ಪಿಎಫ್ ಯೋಧರನ್ನು ನಕ್ಸಲರು ಹತ್ಯೆಗೈದ ಹಿನ್ನಲೆಯಲ್ಲಿ ದೀಪಾವಳಿಯನ್ನೂ ಆಚರಣೆ ಮಾಡಿರಲಿಲ್ಲ.

ಪುಲ್ವಾಮಾದಲ್ಲಿ  ಫೆಬ್ರವರಿ 14 ರಂದು ಆತ್ಮಾಹುತಿ ದಾಳಿಕೋರನೊಬ್ಬ ನಡೆಸಿದ ಭೀಕರ  ದಾಳಿಯಲ್ಲಿ 40 ಮಂದಿ ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next